ಉಡುಪಿ : ೭೫ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಜೈ ಕರ್ನಾಟಕ ರಿಕ್ಷಾ ನಿಲ್ದಾಣ ಕಂಚಿನಡ್ಕದಲ್ಲಿ ನಡೆಸಲಾಯಿತು.
ರೆಹಮಾನ್ ಪಡುಬಿದ್ರಿ ಕ.ರ.ವೇ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷರು ಧ್ವಜಾರೋಹಣ ನೆರವೇರಿಸಿದರು. ಕ.ರ.ವೇ ಯುವಸೇನೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪಡುಬಿದ್ರಿ, ತಾಲೂಕು ಸಂಚಾಲಕ ಸಫ್ವಾನ್ ಕಂಚಿನಡ್ಕ, ಪಡುಬಿದ್ರಿ ವಲಯ ಅಧ್ಯಕ್ಷ ಜಮಾಲ್ , ಪಡುಬಿದ್ರಿ ವಲಯ ಕಾರ್ಯದರ್ಶಿ ಅಶ್ರಫ್ , ಪಡುಬಿದ್ರಿ ವಲಯ ಸಂಚಾಲಕ ನೌಝಲ್ , ಪಡುಬಿದ್ರಿ ಗ್ರಾಮ ಪಂಚಾಯತಿ ಸದಸ್ಯ ಫಿರೋಝ್ ಪಡುಬಿದ್ರಿ, ಅಬ್ದುಲ್ ಅಝೀಝ್ ಪಡುಬಿದ್ರಿ, ಉದಯ ಶೆಟ್ಟಿ ಇನ್ನಾ, ಯೋಗಿಶ್ ಕಂಚಿನಡ್ಕ, ಉರ್ದು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರಿ , ಅಬೂಬಕ್ಕರ್ ಮಂಚಕಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.