ಬೆಂಗಳೂರು : ಶೇ.2 ಪಾಸಿಟಿವ್ ದರ ಕಡಿಮೆ ಇರುವ ತಾಲೂಕುಗಳಲ್ಲಿ ಸೆ.6 ರಿಂದ 6 ರಿಂದ 8 ನೇ ತರಗತಿ ಆರಂಭಿಸಲು ಅವಕಾಶ. ಶನಿವಾರ ಮತ್ತು ಭಾನುವಾರ ಸ್ಯಾನಿಟೈಸರ್ ಮಾಡಲು ಅವಕಾಶ. ಕೋವಿಡ್ ನಿಯಮ ಪಾಲನೆ ಅಗತ್ಯ. ದಿನ ಬಿಟ್ಟು ದಿನ ತರಗತಿ ಆರಂಭಿಸಲು ಅವಕಾಶ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ತಜ್ಞರ ಸಮಿತಿ ಸಭೆ ಬಳಿಕ ಅವರು ಮಾತನಾಡಿದರು. 2900 ಗ್ರಾ.ಪಂ.ನಲ್ಲಿ ಝಿರೋ ಪಾಸಿಟಿವಿಟಿ ದರವಿದೆ. 6472 ಸ್ಯಾಂಪಲ್ ಟೆಸ್ಟ್ ನಲ್ಲಿ 14 ಮಕ್ಕಳಿಗಷ್ಟೇ ಕೊರೋನಾ ಪಾಸಿಟಿವ್ ಬಂದಿದೆ ಎಂದರು.
ದೊಡ್ಡ ಮಟ್ಟಿಗೆ ಗಣೇಶೋತ್ಸವ ಮಾಡುವವರೊಂದಿಗೆ ಮಾತುಕತೆ ನಡೆಸಿ, ಸೆ. 5 ರಂದು ಸಭೆ ನಡೆಸುತ್ತೇವೆ. ಷರತ್ತುಬದ್ಧ ಅನುಮತಿ ನೀಡುವ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದರು.
ಉಳಿದಂತೆ ವೀಕೆಂಡ್ ಕರ್ಫ್ಯೂ ಕೊಡಗು, ದಕ್ಷಿಣ ಕನ್ನಡ, ಹಾಸನ, ಉಡುಪಿ ಜಿಲ್ಲೆಯಲ್ಲಿ ಇರಲಿದೆ. ಉಳಿದಂತೆ ಉಳಿದೆಡೆ ಸಡಿಲ ಮಾಡಲಾಗಿದೆ. ಮದುವೆಗೆ 50% ಅವಕಾಶ(400 ಮಂದಿಗೆ) ನೀಡಲಾಗುವುದು ಎಂದರು.
Advertisement. Scroll to continue reading.