ಬಂಟ್ವಾಳ : ಜೆಸಿಐ ಬಂಟ್ವಾಳದ ಜೆಸಿ ಸಪ್ತಾಹ ಸಮಾರೋಪ ಸಮಾರಂಭ ಬಿ.ಸಿ.ರೋಡು ಕೈಕಂಬ ಯುನೈಟೆಡ್ ಟಿವಿಎಸ್ ಶೋ ರೂಂ ಬಳಿ ನಡೆಯಿತು. ಈ ಸಂದರ್ಭ ಕೋವಿಡ್ ಸಮಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಗೌರವಿಸಲಾಯಿತು ಹಾಗೂ ಜೇಸಿ ನಿಕಟಪೂರ್ವಾಧ್ಯಕ್ಷ ಸದಾನಂದ ಅವರಿಗೆ ಕಮಲಪುತ್ರ, ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು ಅವರಿಗೆ ಮೇಜರ್ ಡೋನರ್, ಸಂದೀಪ್ ಸಾಲ್ಯಾನ್ ಅವರಿಗೆ ಅತ್ಯುತ್ತಮ ಲೋಮ್ ಪ್ರೋಜೆಕ್ಟ್, ಸದಸ್ಯರಾದ ಅಕ್ಷಯ್ ಹಾಗೂ ರಶ್ಮಿ ಶೆಟ್ಟಿ ಅವರಿಗೆ ಯುವ ಜೇಸಿ ಅವರಿಗೆ ಯುವ ಜೇಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಮೇಶ್ ಆರ್. ಮೂಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಕಾರ್ಯಕ್ರಮ ವಿಭಾಗದ ವಲಯ ಸಂಯೋಜಕ ಜಬ್ಬಾರ್, ವಲಯ ಸಹ ಸಂಯೋಜಕ ಯತೀಶ್ ಕರ್ಕೆರಾ, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ,
ಜೇಸಿರೆಟ್ ಅಧ್ಯಕ್ಷೆ ವಿದ್ಯಾ ಉಮೇಶ್, ಸ್ಥಾಪಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ಪೂರ್ವಾಧ್ಯಕ್ಷರಾದ ಲೋಕೇಶ್ ಸುವರ್ಣ, ಸಂತೋಷ್ ಜೈನ್, ಬಾಲಕೃಷ್ಣ ಅಗ್ರಬೈಲ್, ದಯಾನಂದ ರೈ, ಸದಸ್ಯರದ ವೆಂಟೇಶ್ ಕೃಷ್ಣಾಪುರ, ಶ್ರೀನಿವಾಸ ಅರ್ಬಿ, ಕಿಶೋರ್ ಆಚಾರ್ಯ, ವಚನ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ನಾರಾಯಣ ಸಿ. ಪೆರ್ನೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ರೋಷನ್ ರೈ ವಂದಿಸಿದರು. ಕೋಶಾಧಿಕಾರಿ ರವೀಣ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜೆಸಿಲೆಟ್ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.