ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಜಿಲ್ಲಾ ಕೃಷಿಕ ಸಂಘದ ಮಂದಾರ್ತಿ ವಲಯದ ವತಿಯಿಂದ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ಸೋಮವಾರ ಕೂರಾಡಿ ವಿಶ್ವನಾಥ್ ಮಾಸ್ಟರ್ ಮನೆಯ ವಠಾರದಲ್ಲಿ ಜರುಗಿತು.
ನಿವೃತ್ತ ಮುಖ್ಯೋಪಧ್ಯಾಯ ರವೀಂದ್ರನಾಥ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃಷಿಕರು ತಮಗೆ ಇರುವ ಭೂಮಿಯಲ್ಲಿ ಒಂದೇ ತರದ ಕೃಷಿಯನ್ನು ಮಾಡದೆ, ಅಲ್ಪ ಕಾಲದ ಮತ್ತು ಧೀರ್ಘಕಾಲದ ಕೃಷಿಯನ್ನು ಮಾಡಿದಲ್ಲಿ ಲಾಭದಾಯಕವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಬಂಟಕಲ್ಲು ರಾಮಕೃಷ್ಣ ಶರ್ಮ ಮಾತನಾಡಿ, ಯಾಂತ್ರೀಕೃತವಾಗಿ ಕೃಷಿ ಮಾಡುವುದನ್ನು ಕಂಡುಕೊಂಡಲ್ಲಿ ಕೃಷಿಯಲ್ಲಿ ಉತ್ತಮ ಇಳುವರಿ ಮತ್ತು ಲಾಭವನ್ನು ಕಂಡುಕೊಳ್ಳಲು ಸಾದ್ಯ ಎಂದರು.
ಈ ಸಂದರ್ಭ ನಿವೃತ್ತ ಮುಖ್ಯೋಪಧ್ಯಾಯ ಬಾಬು ನಾಯ್ಕ್ ಪ್ರಗತಿಪರ ಕೃಷಿಕರಾದ ಸತ್ಯದೇವ ಕಲ್ಕೂರ , ವಿಶ್ವನಾಥ್ ಎಂ, ಮಂದಾರ್ತಿ ವ್ಯವಸಾಯಿ ಸೇವಾ ಸಹಕಾರಿ ಸಂಘದ ಶಾಖಾಧಿಕಾರಿ ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ಅನೇಕ ಕೃಷಿಕರು ಭಾಗವಹಿಸಿದ್ದರು.
Advertisement. Scroll to continue reading.
In this article:agriculture information, dikscoochiudupi, Diksoochi news, diksoochi Tv, kuradi
Click to comment