ಬೆಂಗಳೂರು: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಹಾಗೂ ಪೀಣ್ಯ ಎಕ್ಸ್ ಪ್ರೆಸ್ ಖ್ಯಾತಿಯ ಗಳಿಸಿ ಕನ್ನಡಿಗ ಅಭಿಮನ್ಯು ಮಿಥುನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವಂತ ಅವರು, ನಾನು ದೇಶಕ್ಕಾಗಿ ಆಡಿದ್ದು ಖುಷಿ, ಸಂತಸ ತಂದಿದೆ.
ನನ್ನ ಪ್ರಥಮ ದರ್ಜೆ ಕ್ರಿಕೆಟ್ ಗೆ ಇದೀಗ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ. ನನಗೆ ಕ್ರಿಕೆಟ್ ಆಡಲು ಅವಕಾಶ ಮಾಡಿಕೊಟ್ಟಂತ ಬಿಬಿಸಿಐ, ನನ್ನ ಕ್ರಿಕೆಟ್ ಜೀವನ ರೂಪಿಸಿದಂತ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ.
Advertisement. Scroll to continue reading.
2010 ಮತ್ತು 2011ನೇ ಸಾಲಿನಲ್ಲಿ ಭಾರತ ತಂಡದ ಪರ 4 ಟೆಸ್ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 9 ವಿಕೆಟ್, 5 ಏಕ ದಿನ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದು, ಮಿಥುನ್ ರಾಷ್ಟ್ರೀಯ ತಂಡಕ್ಕಿಂತ ಹೆಚ್ಚು ಕರ್ನಾಟಕ ರಾಜ್ಯ ತಂಡದಲ್ಲಿ ಆಡಿದ್ದಾರೆ. ಇದಲ್ಲದೇ ವೇಗದ ಬೌಲರ್ ಎಂಬುದಾಗಿಯೂ ಕೀರ್ತಿ ಗಳಿಸಿದ್ದಾರೆ.