ಪರ್ಕಳ : ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ದೇಶದ ಗಡಿ ಅಂಚಿನಲ್ಲಿ ದೇಶ ಸೇವೆ ಮಾಡಿ ನಿವೃತ್ತರಾದ ಯೋಧ ಲಾನ್ಸ್ ನಾಯಕ್ ಉಮೇಶ್ ಹಾಗೂ ಲಾನ್ಸ್ ನಾಯಕ್ ಕೃಷ್ಣಪ್ಪ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ರವಿವಾರ ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಿತು.
ಶೆಟ್ಟಿಬೆಟ್ಟು ಶಾಲಾ ವಠಾರದಿಂದ ಬೈಕ್ ರಾಲಿ ಮೂಲಕ ಸಭಾಭವನದ ವರೆಗೆ ಯೋಧರನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮವನ್ನು ನಗರಸಭಾಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಎಂ.ಐ.ಟಿ, ಚೀಫ್ ಸೆಕ್ಯೂರಿಟಿ ಆಫೀಸರ್ ರತ್ನಾಕರ ಸಾಮಂತ್ ವಹಿಸಿದ್ದರು. ಈ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಪ್ರಸಾದ್ ರೈ, ಜ್ಯೋತಿಷಿ ರತ್ನ ಕಬ್ಯಾಡಿ ಜಯರಾಮ್, ನಗರಸಭಾ ಸದಸ್ಯೆ ಅಶ್ವಿನಿ ಅರುಣ ಪೂಜಾರಿ, ಪರ್ಕಳ ಸುಮಂಗಳ ಪ್ರೊವಿಜನ್ ಸ್ಟೋರ್ಸ್ ನ ಕೆ.ಪ್ರಕಾಶ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.