ವರದಿ : ದಿನೇಶ್ ರಾಯಪ್ಪನಮಠ
ಕೋಟ: ನಟ ಪುನೀತ್ಚರಾಜ್ ಕುಮಾರ್ ನಿಧನಕ್ಕೆ ನೊಂದು ಅಭಿಮಾನಿಯೋರ್ವ ಕೈ ಜಜ್ಜಿಕೊಂಡ ಘಟನೆ ಸಾಲಿಗ್ರಾಮದಲ್ಲಿ ನಡೆದಿದೆ. ಕೆಮ್ಮಣ್ ಕೆರೆ ನಿವಾಸಿ ಸತೀಶ್ ಗಾಯಗೊಂಡ ಅಭಿಮಾನಿ. ಪುನಿತ್ ಸಾವಿಗೆ ನೊಂದು ತಾನು ಜೀವನ ಸಾಗಿಸುತ್ತಿದ್ದ ಆಟೋ ವಿನ ಗ್ಲಾಸ್ ನಿಂದ ಮೈತುಂಬ ಗಾಯಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಾಲಿಗ್ರಾಮ ಮೀನುಮಾರುಕಟ್ಟೆ ಸಮೀಪ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಈತ ಪುನೀತ್ ಅಭಿಮಾನಿಯಾಗಿದ್ದು, ಪುನಿತ್ ಸಾವಿನ ಆಘಾತಕ್ಕೆ ನೊಂದು ತನ್ನದೆ ರಿಕ್ಷಾದ ಗ್ಲಾಸ್ ಬಡಿದು ತನ್ನ ದೇಹಕ್ಕೆ ಹಾನಿಗೊಳಿಸಿಕೊಂಡಿದ್ದಾರೆ. ವಿಷಯ ತಿಳಿದ ಸ್ನೇಹಿತರು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement. Scroll to continue reading.