ಪಡುಬಿದ್ರಿ : ಕಾಪು ತಾಲೂಕಿನ ಅದಮಾರಿನ ಲತಾ ಮತ್ತು ಶಂಕರ್ ಪೂಜಾರಿ ದಂಪತಿಯ ಗೃಹ ನಿರ್ಮಾಣ ಕಾರ್ಯ ಕಳೆದ ಸುಮಾರು 8 ವರ್ಷಗಳಿಂದ ಅಪೂರ್ಣಗೊಂಡಿದ್ದು, ಈ ಬಗ್ಗೆ ಪಡುಬಿದ್ರಿ ಸಮಾಜಸೇವೆ ಯುವಕರ ತಂಡ ಶ್ರೀಭಗವತಿ ಗ್ರೂಫ್ ತನ್ನ ವಿಶೇಷ ಸೇವಾ ಯೋಜನೆಯ ಮುಖಾಂತರವಾಗಿ ವಿವಿಧ ಸಹೃದಯಿ ದಾನಿಗಳ ಸಹಕಾರದಿಂದ ಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಇಂದು ನೂತನ ಗೃಹವನ್ನು ಕಳಶ ನೀಡುವ ಮೂಲಕ ಶಂಕರ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಮನೆ ನಿರ್ಮಾಣ ಕಾರ್ಯದಲ್ಲಿ ಶ್ರೀಭಗವತಿ ಗ್ರೂಫ್ ನೊಂದಿಗೆ ಸಹಕರಿಸಿದ ಪ್ರೇಮಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿಯ ಮಿಥುನ್.ಆರ್.ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಇನ್ನಾ, ಯುವರಾಜ್ ಕುಲಾಲ್, ದೇವಿಪ್ರಸಾದ್ ಬೆಳ್ಳಿಬೆಟ್ಟು , ಸಂದೇಶ್ ಶೆಟ್ಟಿ ಪಾದೆಬೆಟ್ಟು, ಸಂದೀಪ್, ಪ್ರಭಾಕರ ಕಂಚಿನಡ್ಕ, ಪ್ರಜ್ವಲ್ ಕುಲಾಲ್, ದೀಕ್ಷಿತ್ ಶೆಟ್ಟಿ, ದಿಲೀಪ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.