ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಶುಕ್ರವಾರ ರಾತ್ರಿ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಕರ್ನಾಟಕ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.
ಸುಜಾ ಕುಶಾಲಪ್ಪ( ಕೊಡಗು), ಕೋಟಾ ಶ್ರೀನಿವಾಸ ಪೂಜಾರಿ(ದಕ್ಷಿಣ ಕನ್ನಡ), ಎಂ. ಕೆ. ಪ್ರಾಣೇಶ್ (ಚಿಕ್ಕಮಗಳೂರು), ಡಿ. ಎಸ್. ಅರುಣ್(ಶಿವಮೊಗ್ಗ), ಪ್ರದೀಪ್ ಶೆಟ್ಟರ್(ಧಾರವಾಡ),
ಮಹಾಂತೇಶ ಕವಟಗಿಮಠ(ಬೆಳಗಾವಿ), ಬಿ. ಜಿ. ಪಾಟೀಲ್(ಗುಲ್ಬರ್ಗಾ) , ಕೆ. ಎಸ್. ನವೀನ್ (ಚಿತ್ರದುರ್ಗ), ರಘು ಕೌಟಿಲ್ಯ(ಮೈಸೂರು), ವಿಶ್ವನಾಥ್(ಹಾಸನ) , ಗಣಪತಿ ಉಳ್ವೇಕರ್(ಉತ್ತರ ಕನ್ನಡ),
ಬೀದರ್ (ಪ್ರಕಾಶ್ ಖಂಡ್ರೆ), ಬೆಂಗಳೂರು (ಎಚ್. ಎಸ್. ಗೋಪಿನಾಥ ರೆಡ್ಡಿ), ಮಂಡ್ಯ (ಮಂಜು ಕೆ. ಆರ್. ಪೇಟೆ), ಕೋಲಾರ (ಡಾ. ಕೆ. ಎನ್. ವೇಣುಗೋಪಾಲ್), ರಾಯಚೂರು (ವಿಶ್ವನಾಥ್ ಎ. ಬನಹಟ್ಟಿ).
ಬಿ. ಎಂ. ನಾರಾಯಣಸ್ವಾಮಿ(ಬೆಂಗಳೂರು ಗ್ರಾ.), ವೈ. ಎಂ. ಸತೀಶ್(ಬಳ್ಳಾರಿ), ಎನ್. ಲೋಕೇಶ್(ತುಮಕೂರು), ಪಿ. ಎಚ್. ಪೂಜಾರ್(ಬಿಜಾಪುರ).
ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ 20 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಬೆಳಗಾವಿ 2, ಧಾರವಾಡ 2, ದಕ್ಷಿಣ ಕನ್ನಡ 2, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇನ್ನೂ ಅಭ್ಯರ್ಥಿಗಳು ಘೋಷಣೆಯಾಗಬೇಕಿದೆ.
ವಿಧಾನ ಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆ ದಿನವಾಗಿದೆ. ನವೆಂಬರ್ 24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ.