ಉಡುಪಿ : ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಮನೋಬಲ, ದೇಹಬಲ ಅದೇ ರೀತಿ ಶಿಸ್ತು ಅವಕಾಶ ಹಾಗೂ ಸೇವಾ ಮನೋಭಾವ ಗಳ ಬಗ್ಗೆ ಸ್ವಾಮೀಜಿಯವರು ನಮಗೆ ಹೇಳಿದ್ದಾರೆ ಅದನ್ನು ಅಳವಡಿಸಿಕೊಳ್ಳಿ ಎಂದು ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಡಾ. ವಿಜಯ್ ನೆಗಳೂರು ಹೇಳಿದರು.
ಅವರು ಕ್ರಿಶ್ಚಿಯನ್ ಪ.ಪೂ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ವಹಿಸಿದ್ದರು.
Advertisement. Scroll to continue reading.
ಈ ಸಂದರ್ಭದಲ್ಲಿ ವಿದ್ಯಾಥಿ೯ಗಳಿಗೆ ಭಾಷಣ ಸ್ಪಧ೯ ನಡೆಯಿತು. ವೇದಿಕೆಯಲ್ಲಿ ಪೂವ೯ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಕಿರಣ್ ಭಟ್, ಸಂದೀಪ್ ಕುಮಾರ್, ವೀಕ್ಷಿತ್ ಪೂಜಾರಿ, ಡಾ. ಸಮದುಡು ಮುಂತಾದವರಿದ್ದರು. ಉಪನ್ಯಾಸಕ ನಾಗರಾಜ್ ನಿರೂಪಿಸಿ, ವಂದಿಸಿದರು.