Connect with us

Hi, what are you looking for?

ಕ್ರೀಡೆ

ಏಷ್ಯನ್ ಅಂಡರ್ -22 ಚಾಂಪಿಯನ್‌ಶಿಪ್‌ನಿಂದ ಹೊರಬರಲು ನಿರ್ಧರಿಸಿದ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ

2

ನವದೆಹಲಿ: covid -19 ಪ್ರಕರಣಗಳ ಜಾಗತಿಕ ಉಲ್ಬಣದಿಂದಾಗಿ ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಡೆಯಲಿರುವ ಪುರುಷ ಮತ್ತು ಮಹಿಳೆಯರ ಏಷ್ಯನ್ ಅಂಡರ್ -22 ಚಾಂಪಿಯನ್‌ಶಿಪ್‌ನಿಂದ ಹೊರಬರಲು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ನಿರ್ಧರಿಸಿದೆ.

ಆದರೆ ಪಂದ್ಯಾವಳಿಯನ್ನು ಕೊವಿಡ್ ಕಡಿಮೆಯಾದ ಸಮಯದಲ್ಲಿ ಮರು ನಿಗದಿಪಡಿಸಿದಲ್ಲಿ ಭಾಗವಹಿಸಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.

ಏಷ್ಯನ್ ಬಾಕ್ಸಿಂಗ್ ಒಕ್ಕೂಟಕ್ಕೆ ಹಾಗೂ ಟೂರ್ನಿಯ ಆಯೋಜಕ ಸಮಿತಿಗೆ ಭಾರತ ವಾಪಸಾತಿಯನ್ನು ದೃಢಪಡಿಸುವ ಪತ್ರವನ್ನು ಕಳುಹಿಸಲಾಗಿದೆ ಎಂದು ಫೆಡರೇಶನ್‌ನ ವಿಶ್ವಾಸಾರ್ಹ ಮೂಲವು ಪಿಟಿಐಗೆ ಖಚಿತಪಡಿಸಿದೆ. ಈವೆಂಟನ್ನು ಜನವರಿ 20 ರಿಂದ 30 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಏಷ್ಯನ್ ಈವೆಂಟ್ ಅನ್ನು ಮೂಲತಃ ಕಳೆದ ವರ್ಷ ಡಿಸೆಂಬರ್ 7 ರಿಂದ 17 ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಗಿತ್ತು.

Advertisement. Scroll to continue reading.

1999, 2000, 2001 ಮತ್ತು 2002 ರಲ್ಲಿ ಜನಿಸಿದ ಬಾಕ್ಸರ್‌ಗಳು ಖಂಡದಲ್ಲಿ ಮೊದಲ ಬಾರಿಗೆ ನಡೆಯುವ ಈವೆಂಟ್‌ನಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ. 12 ಮಹಿಳೆಯರ ಹಾಗೂ 13 ಪುರುಷರ ತೂಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಬೇಕಿತ್ತು.

ಈಗಾಗಲೇ ಭಾರತೀಯ ಬಾಕ್ಸಿಂಗ್ ಕೋವಿಡ್ ಸಮಸ್ಯೆ ಕಾಡುತ್ತಿದ್ದು, ಪಟಿಯಾಲದಲ್ಲಿರುವ ಪುರುಷರ ಹಿರಿಯ ರಾಷ್ಟ್ರೀಯ ಶಿಬಿರದಲ್ಲಿ 20 ಬಾಕ್ಸರ್‌ಗಳು ಸೇರಿದಂತೆ 26 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಭಾರತೀಯ ಪುರುಷರ ತಂಡದಲ್ಲಿ ಏಷ್ಯಾದ ಯುವ ಕಂಚಿನ ಪದಕ ವಿಜೇತ ಮೊಹಮ್ಮದ್ ಎತಾಶ್ ಖಾನ್ (63.5 ಕೆಜಿ) ಮತ್ತು ಹಾಲಿ ರಾಷ್ಟ್ರೀಯ ಚಾಂಪಿಯನ್ ರೋಹಿತ್ ಮೋರ್ (60 ಕೆಜಿ) ಸೇರಿದಂತೆ ಮೊದಲಾದವರು ಭಾಗವಹಿಸಲಿದ್ದರು. ಮಹಿಳಾ ತಂಡದಲ್ಲಿ ವಿಶ್ವ ಯೂತ್ ಚಾಂಪಿಯನ್ ಅರುಂಧತಿ ಚೌಧರಿ (71 ಕೆಜಿ) ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತೆ ಜೈಸ್ಮಿನ್ (63 ಕೆಜಿ) ಭಾಗವಹಿಸಲಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!