Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಯುವ ಸ್ವಾಸ್ಥ್ಯ, ಧನಾತ್ಮಕ ಜೀವನಶೈಲಿ ಮತ್ತು ಫಿಟ್ ಇಂಡಿಯಾ ತರಬೇತಿ ಕಾರ್ಯಗಾರ

1

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ನೆಹರು ಯುವ ಕೇಂದ್ರ ಉಡುಪಿ, ಗಾಯತ್ರಿ ಮಹಿಳಾ ಮಂಡಳಿ ದೊಂಡೇರಂಗಡಿ-ಕುಕ್ಕುಜೆ, ಶಾಂತಿನಿಕೇತನ ಕಡ್ತಲ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಯುವ ಸ್ವಾಸ್ಥ್ಯ, ಧನಾತ್ಮಕ ಜೀವನಶೈಲಿ ಮತ್ತು ಫಿಟ್ ಇಂಡಿಯಾ ತರಬೇತಿ ಕಾರ್ಯಗಾರವು ಭಾನುವಾರ ಶ್ರೀ ವಿಶ್ವಕರ್ಮ ಸಮಾಜ ಸಂಘ ದೊಂಡೇರಂಗಡಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠಲ್ ಶೆಟ್ಟಿ ಮಾತನಾಡಿ, ಒಳ್ಳೆಯ ಮನಸ್ಸಿನಿಂದ ದೇಶವನ್ನು ಕಟ್ಟಲು ಸಾಧ್ಯ. ನಮ್ಮ ಆಲೋಚನೆಗಳು, ಕೆಲಸ ಕಾರ್ಯಗಳು ಉದಾತ್ತವಾಗಿ ಒಳ್ಳೆ ಮನಸ್ಸಿನಿಂದ ಕೂಡಿದ್ದರೆ ಏನು ಬೇಕಾದರೂ ಸಾಧಿಸಬಹುದು. ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಒಳ್ಳೆ ಮನಸ್ಸಿನಿಂದ ಮಾಡುವ ಎಂದರು.

Advertisement. Scroll to continue reading.

ಯೋಗ ಮಾಡುವುದರಿಂದ ಮಾನವ ದೈಹಿಕ ಮತ್ತು ಮಾನಸಿಕವಾಗಿ ಸದೃಢನಾಗಿ ಆರೋಗ್ಯವಂತರಾಗಿರುತ್ತಾನೆ. ಜೀವನಕ್ರಮದಲ್ಲಿ ವ್ಯಾಯಮ, ಆಹಾರ ಪದ್ಧತಿ, ಕ್ರೀಡಾ ಚಟುವಟಿಕೆ, ನಿದ್ದೆ ಹಾಗೂ ಧನಾತ್ಮಕ ಚಿಂತನೆಗಳು ಶಶಕ್ತ ಮಾನವನ್ನಾಗಿಸುತ್ತದೆ ಎಂದರು.

ಶಾಂತಿನಿಕೇತನ ಯುವ ವೃಂದದ ಲೋಗೋವನ್ನು ಸೀತಾನದಿ ವಿಠಲ ಶೆಟ್ಟಿ ಅನಾವರಣಗೊಳಿಸುವುದರ ಮೂಲಕ ನೂತನವಾಗಿ ರಚನೆಯಾದ ಶಾಂತಿನಿಕೇತನ ಕಡ್ತಲ ಘಟಕವನ್ನು ಉದ್ಘಾಟಿಸಿದರು.

ಶಾಂತಿನಿಕೇತನದ ಅಧ್ಯಕ್ಷ ರಾಜೇಶ್ ಮಾತನಾಡಿ ನಮ್ಮ ಸಂಘ ರಾಜ್ಯವ್ಯಾಪಿ ಮನ್ನಣೆ ಪಡೆದಿದೆ. ನೂತನವಾಗಿ ರಚನೆಯಾದ ಕಡ್ತಲ ಘಟಕದಲ್ಲಿ ನಿರಂತರ ಚಟುವಟಿಕೆಗಳು ನಡೆಯಲಿವೆ ಎಂದರು.

ಕಾರ್ಯಗಾರ:
ಯೋಗ ಮತ್ತು ಜೀವನಶೈಲಿಯ ಬಗ್ಗೆ ಸೀತಾನದಿ ವಿಠಲಶೆಟ್ಟಿ ನಡೆಸಿಕೊಟ್ಟರು. ಉತ್ತಮ ಆರೋಗ್ಯ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಆಳ್ವಾಸ್ ಆಯುರ್ವೇದ ಕಾಲೇಜಿನ ಮನೋರೋಗ ತಜ್ಞ ಡಾ. ರವಿಪ್ರಸಾದ್ ಹೆಗ್ಡೆ, ಭಾರತೀಯರಾದ ನಮ್ಮ ಮೂಲಭೂತ ಕರ್ತವ್ಯಗಳು ಮತ್ತು ಜವಾಬ್ದಾರಿಯ ಕುರಿತು ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಕುಮಾರ್ ಹಾಗೂ ಯುವ ಜನತೆ ಮತ್ತು ಸಮಾಜದ ಬಗ್ಗೆ ಉಪನ್ಯಾಸಕ ನಾಗರಾಜ್ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಕಾವ್ಯ ಪ್ರಭಾಕರ ಆಚಾರ್ಯ ವಹಿಸಿದ್ದರು. ಕಡ್ತಲ ಗ್ರಾಪಂ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್ ಉದ್ಘಾಟಿಸಿದರು.

Advertisement. Scroll to continue reading.

ಕಾರ್ಯಕ್ರಮದಲ್ಲಿ ಕಡ್ತಲ ಗ್ರಾಪಂ ಉಪಾಧ್ಯಕ್ಷ ಸತೀಶ್ ಪೂಜಾರಿ, ದೊಂಡೇರಂಗಡಿ ವಿಶ್ವಕರ್ಮ ಬ್ರಾಹ್ಮಣ ಸಂಘದ ಅಧ್ಯಕ್ಷ ಈಶ್ವರ್ ಆಚಾರ್ಯ, ಶಾಂತಿನಿಕೇತನ ಕತ್ತಲ ಘಟಕದ ಸಂಚಾಲಕ ಶರತ್ ಆಚಾರ್ಯ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಸಂಪತ್, ವೈದ್ಯ ಪ್ರಮೋದ್ ಕುಮಾರ್ ಹೆಗ್ಡೆ ಹಾಗೂ ವಿವಿಧ ಸಂಘಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

You May Also Like

ರಾಜ್ಯ

1 ಬೆಂಗಳೂರು:  ಪ್ರಧಾನಿ ಮೋದಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು...

ರಾಷ್ಟ್ರೀಯ

1 ಬೆಂಗಳೂರು: ಎನ್‌ಡಿಎ ಮೈತ್ರಿಕೂಟದಡಿ ‘ಅಬ್‌ ಕಿ ಬಾರ್‌ 400 ಪಾರ್‌’ ಘೋಷಣೆ ಮೊಳಗಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ತಲುಪಲು ಟಿಕೆಟ್‌ ಹಂಚಿಕೆ...

ಅರೆ ಹೌದಾ!

0 ಬೆಂಗಳೂರು: ಫ್ರೀ ಟಿಕೆಟ್‌ ಎಂದು ಪಕ್ಷಿಗಳನ್ನು ಜೊತೆಗಿಟ್ಟುಕೊಂಡು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್‌ ನೀಡಿದ ಟಿಕೆಟ್‌ ದೊಡ್ಡ ಶಾಕ್‌ ನೀಡಿದೆ. ಪಕ್ಷಿಗಳಿಗೆ ಟಿಕೆಟ್ ನೀಡಬೇಕೆನ್ನುವುದು ನಿಯಮವಾದರೂ ನೀಡಿದ ಟಿಕೆಟ್...

ರಾಷ್ಟ್ರೀಯ

1 ಬೆಂಗಳೂರು: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್‌ ಡಾಲರ್‌ (ಅಂದಾಜು 133.54 ಕೋಟಿ ರು.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ...

ರಾಷ್ಟ್ರೀಯ

0 ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ  ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು...

error: Content is protected !!