ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ಪಾದದ ಮೇಲೆ ಲಾರಿಯ ಮುಂಭಾಗದ ಚಕ್ರ ಹರಿದು ವ್ಯಕ್ತಿ ಗಾಯಗೊಂಡಿರುವ ಘಟನೆ ಹೆಬ್ರಿ – ಸೋಮೇಶ್ವರ ರಸ್ತೆಯಲ್ಲಿ ನಡೆದಿದೆ. ಪ್ರದೀಪ್ ಕುಮಾರ್ (38) ಗಾಯಗೊಂಡವರು.
ಪ್ರದೀಪ್ ಅವರು ವಾರ್ಷಿಕ ಮಾರಿ ಪೂಜೆಯ ಪ್ರಯುಕ್ತ ಹೆಬ್ರಿ ಗ್ರಾಮದ ನಿಸರ್ಗಧಾಮದ ಬಳಿ ಹೆಬ್ರಿ – ಸೋಮೇಶ್ವರ ರಸ್ತೆಯ ಬದಿಯಲ್ಲಿ ಕೋಳಿ ಕೊಯ್ಯಲು ನಿಂತಿರುವಾಗ ಹೆಬ್ರಿ ಕಡೆಯಿಂದ ಅಗುಂಬೆ ಕಡೆಗೆ ಬರುತ್ತಿದ್ದ ಲಾರಿ ಎಡಕಾಲಿನ ಪಾದದ ಮೇಲೆ ಹರಿದಿದೆ. ಪರಿಣಾಮ ಪಾದದ ಬಳಿ ಜಖಂಗೊಂಡಿದೆ.
Advertisement. Scroll to continue reading.
ಲಾರಿ ಚಾಲಕ ಸತೀಶ್ ನಾಯ್ಕ್ ಲಾರಿಯನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿದರ ಪರಿಣಾಮ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಸ್ಪತ್ರೆಯ ಖರ್ಚನ್ನು ಲಾರಿಯವರು ನೀಡುತ್ತೇನೆಂದು ಭರವಸೆಯನ್ನು ನೀಡಿ ನಂತರ ಅಸ್ಪತ್ರೆಯ ಖರ್ಚು ವೆಚ್ಚವನ್ನು ನೀಡಲು ನಿರಾಕರಿಸಿರುವುದರಿಂದ ದೂರು ನೀಡಲು ವಿಳಂಬವಾಗಿದೆ ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.