ವರದಿ : ಬಿ.ಎಸ್.ಆಚಾರ್ಯ
ಬಾರಕೂರು: ಬಂಡೀಮಠ ಶ್ರೀ ಕ್ಷೇತ್ರ ನಾಗರಡಿಯಲ್ಲಿ ದಿವಂಗತ ಸೀತಾರಾಮ ಅಡಿಗ, ದಿವಂಗತ ಮಹಾಬಲೇಶ್ವರ ಅಡಿಗರ ಕುಟುಂಬಿಕರಾದ ಸುಬ್ರಹ್ಮಣ್ಯ ಅಡಿಗ ಮತ್ತು ಸಮಸ್ತ ಕುಟುಂಬಿಕರಿಂದ ಆಶ್ಲೇಷ ಬಲಿ ಮತ್ತು ಚತು: ಪವಿತ್ರ ನಾಗಮಂಡಲ ಸೇವೆ ಶನಿವಾರ ಮತ್ತು ಭಾನುವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು.
ವೇದ ಮೂರ್ತಿ ಹೃಷಿಕೇಶ ಬಾಯರಿ ಮತ್ತು ರಮೇಶ್ ಭಟ್ ನಾಯರ್ ಬೆಟ್ಟು ಇವರ ನೇತೃತ್ವದಲ್ಲಿ ಗ್ರಾಮದ ದೇವರೀಗೆ ಮತ್ತು ಮನೆದೇವರಾದ ಶ್ರೀಚಕ್ರ ಅಮ್ಮನವರಿಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು, ಪೂಜೆಗಳು ಜರುಗಿತು.
ಭಾನುವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ನೂರಾರು ಮಂದಿ ಭಾಗವಹಿಸಿದರು.
ಇದೇ ಸಂದರ್ಬದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಅವರನ್ನು ಕ್ಷೇತ್ರದ ಮತ್ತು ಕುಟುಂಬಿಕರ ವತಿಯಿಂದ ಗೌರವಿಸಲಾಯಿತು .
ಶ್ರೀಕ್ಷೇತ್ರ ನಾಗರಡಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಬಿ.ಎಂ ಭಟ್, ಅರ್ಚಕ ಶ್ರೀಧರ ಅಡಿಗ ಮತ್ತು ನಾನಾ ಸಮಿತಿಯ ಸದಸ್ಯರುಗಳು ಕಾರ್ಯಕ್ರಮದಲ್ಲಿದ್ದರು.
ಈ ಸಂದರ್ಭ ಅಡಿಗ ಕುಟುಂಬಿಕರಾದ ಚಂದ್ರ ಅಡಿಗ ಜನ್ನಾಡಿ, ಸುರೇಶ್ ಅಡಿಗ ಕಡಪ, ಸೀತಾರಾಮ ಅಡಿಗ ಹಳುವಳ್ಳಿ ಮಠ, ವಸಂತ ಅಡಿಗ ಬೆಂಗಳೂರು, ಬಾಲಕೃಷ್ಣ ಅಡಿಗ ಇಂದ್ರಾಳಿ ಉಡುಪಿ, ಸತ್ಯನಾರಾಯಣ ಅಡಿಗ ಬಂಡೀಮಠ, ಶ್ಯಾಮ ಸುಂದರ ಅಡಿಗ ಒಳಕಾಡು, ಮಂಜುನಾಥ ಅಡಿಗ ಕೈವಾರ, ಸತ್ಯನಾರಾಯಣ ಅಡಿಗ ಬೆಂಗಳೂರು, ಮೋಹನ ಅಡಿಗ ತುಮಕೂರು ಸೇರಿದಂತೆ ಅಡಿಗ ಕುಟುಂಬಸ್ಥರು ಉಪಸ್ಥಿತರಿದ್ದರು.
ನಾಗ ಪಾತ್ರಿ ಲಕ್ಷ್ಮೀ ನಾರಾಯಣ ಮಧ್ಯಸ್ಥರು ಮತ್ತು ಕೃಷ್ಣ ಪ್ರಸಾದ್ ಮತ್ತು ಭಳಗ ಮುದ್ದೂರು ಇವರ ಬಳಗದ ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ನಾಗ ಕನ್ನಿಕೆಯಾಗಿ ನಾಗಮಂಡಲ ಜರುಗಿತು.