ಬೆಂಗಳೂರು : ಇಂದು 2022-23 ನೇ ಸಾಲಿನ ಬಜೆಟ್ ನ್ನು ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದರು. 2 ಗಂಟೆ 11ನಿಮಿಷಗಳಷ್ಟು ಸುದೀರ್ಘವಾಗಿ, 2 ಲಕ್ಷದ 65 ಸಾವಿರದ 720 ಕೋಟಿ ಗಾತ್ರದ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.
- ಯಂತ್ರೋಪಕರಣಗಳ ಖರೀದಿಗೆ ರೈತ ಶಕ್ತಿ ಯೋಜನೆ ಘೋಷಣೆ
- ರೈತ ಶಕ್ತಿ ಯೋಜನೆಗೆ 500 ಕೋಟಿ ಮೀಸಲು
- ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸ್ಥಾಪಿಸಲು 50 ಕೋ.ನಿಗದಿ
- ಎಕರೆಗೆ 250 ರೂ.ನಂತೆ ಗರಿಷ್ಠ 5
- ರೈತರ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ
- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಿನಿ ಆಹಾರ ಪಾರ್ಕ್
- ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ
- ಮೇಕೆದಾಟು ಯೋಜನೆಗೆ 1000ಕೋಟಿ ರೂ.
- ಎತ್ತಿನಹೊಳೆ ಯೋಜನೆಗೆ 3 ಸಾ.ಕೋಟಿ.
- ಕೃಷ್ಣ ಮೇಲ್ದಂಡೆ
- ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ
- ಬೆಂಗಳೂರು ಅಭಿವೃದ್ಧಿಗೆ 8,409 ಕೋಟಿ ಮೀಸಲು
- ಮರಾಠ ಅಭಿವೃದ್ಧಿಗೆ 50 ಕೋ.,ವೀರ ಶೈವ ಲಿಂಗಾಯತ, ಒಕ್ಕಲಿಗ ಅಭಿವೃದ್ಧಿಗೆ 100 ಕೋ.,ಕೊಡವ ಜನಾಂಗ ಅಭಿವೃದ್ಧಿಗೆ 10 ಕೋ., ಕ್ರಿಶ್ಚಿಯನ್, ಜೈನ, ಬೌದ್ಧ ,ಸಿಖ್, ಅಭಿವೃದ್ಧಿಗೆ 50 ಕೋ.
- ನಾರಾಯಣ ಗುರು ಸ್ಮರಣಾರ್ಥ ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿ ನಾರಾಯಣಗುರು ವಸತಿ ಶಾಲೆ
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಮಕ್ಕಳಿಗೆ ಇಂಗ್ಲೀಷ್ ಕಲಿಯಲು 5 ಕೋ.
- ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳಿಗೆ
- 30,000 ಕಾಶಿ ಯಾತ್ರಿಗಳಿಗೆ, 5000
- ಪುಣ್ಯಕೋಟಿ ದತ್ತು ಯೋಜನೆ
- ಕೆ ಎಂ ಎಫ್ ಮೂಲಕ ಸ್ಥಳೀಯ ಗೋವು ತಳಿ ವಿತರಣೆ
- ಗೋಮಾತಾ ಸರ್ಕಾರಿ ಸಂಘ ಸ್ಥಾಪನೆ
- ಮತ್ಸ್ಯಸಿರಿ ಯೋಜನೆ ಜಾರಿ
- ಕಡಲ್ಕೊರೆತ ತಡೆಗಟ್ಟಲು ಹೊಸಕ್ರಮ
- ಪೆಟ್ರೋಲ್,ಡಿಸೇಲ್ ಮೇಲಿನ ರಾಜ್ಯ ಸುಂಕ ಏರಿಕೆ ಇಲ್ಲ
- ಸಿನಿಮಾ ಸಬ್ಸಿಡಿ 125 ರಿಂದ 200 ಕನ್ನಡ ಚಿತ್ರಗಳಿಗೆ ಏರಿಕೆ
- ಆಶಾ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ. ಬಿಸಿಯೂಟ ತಯಾರಿಕರಿಗೆ 1000 ರೂ.ಹೆಚ್ಚಳ. ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ದಿಂದ 1,5000 ಕ್ಕೆ ಗೌರವ ಧನ ಹೆಚ್ಚಳ
- ಕೊಪ್ಪಳದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಮಾಡಲಾಗುತ್ತದೆ
- ಜೋಗ ಜಲಪಾತದಲ್ಲಿ 116 ಕೋ.ರೂ.ವೆಚ್ಚದಲ್ಲಿ ಹೊಟೇಲ್ ಹಾಗೂ ರೋಪ್ ವೇ ಅಭಿವೃದ್ಧಿ
- ನಂದಿ ಬೆಟ್ಟದಲ್ಲಿ 93 ಕೋ.ರೂ. ವೆಚ್ಚದಲ್ಲಿ ರೋಪ್ ವೇ
- ಬೆಂಗಳೂರಿಗೆ ಜ್ಯುವೆಲ್ಲರಿ ಪಾರ್ಕ್
- ವಿಧವಾ ವೇತನಾ 200 ರೂ.ಹೆಚ್ಚಳ
- ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಪತ್ಯೇಕ
- ಹುಬ್ಬಳ್ಳಿ ಜಯದೇವ ಆಸ್ಪತ್ರೆ, ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ
- ಬೆಂಗಳೂರು ನಗರದ ನಾಲ್ಕು ಭಾಗದಲ್ಲಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತದೆ
- ಬಾಗಲಕೋಟೆಯಲ್ಲಿ 7 ವಿವಿ ಸ್ಥಾಪನೆ
- ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯ
- ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ಸ್ಥಾಪನೆ, ಬೈಂದೂರು, ಮಲ್ಪೆ ಬಂದರು ನಿರ್ಮಾಣ, ಪ್ರಧಾನಮಂತ್ರಿ ಮತ್ಸ್ಯ ಸಂಒದ ಯೋಜನೆಯಡಿ 250 ಕೋ.ಮೀಸಲು
- ಉತ್ತರಕನ್ನಡದ ಕೇಣಿ – ಬೇಣಿಕೇರಿಯಲ್ಲಿ ಗ್ರೀನ್ ಫಿಲ್ಡ್ ಬಂದರು
- ರಾಜ್ಯದಲ್ಲಿ ಕೇಂದ್ರದ ಸಹಕಾರದೊಂದಿಗೆ ರೈಲು ಮಾರ್ಗ
- 20 ನೂತನ ರೈಲ್ವೆ, ಮೇಲ್ಸೇತುವೆ ಸ್ಥಾಪನೆ
- ಸರ್ವರಿಗೂ ಸೂರು ಯೋಜನೆಯಡಿ 5 ಲಕ್ಷ ಹೊಸ ಮನೆ ನಿರ್ಮಾಣಕ್ಕೆ 6,612 ಕೋ.
- ವೈದ್ಯಕೀಯ ಸೌಲಭ್ಯ ನೀಡುವ ಯಶಸ್ವಿನಿ ಯೋಜನೆ ಮತ್ತೆ ಜಾರಿ
- ರೈತ ಮಹಿಳೆಯರಿಗೆ 5 ಲಕ್ಷ ಕೋಳಿ ಮರಿ ವಿತರಣೆಗೆ ಕ್ರಮ
- ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ
- ದೇವಾಲಯಗಳಿಗೆ ಸ್ವಯತ್ತತೆ
- ಯಲಹಂಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ
- ಕೊಲ್ಲೂರು, ಧರ್ಮಸ್ಥಳ, ತಿರುಪತಿ, ಮಂತ್ರಾಲಯಕ್ಕೆ ಪ್ಯಾಕೇಜ್ ಟ್ರಿಪ್ ಸೇವೆ
- ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋ.ಅನುದಾನ, ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜನೆ, ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣ
- ಸಾಹಿತಿಗಳಾದ ಡಾ.ಸಿದ್ಧಲಿಂಗಯ್ಯ, ಡಾ.ಎಂ.ಚಿದಾನಂದಮೂರ್ತಿ,ಚನ್ನವೀರ ಕಣವಿ, ಡಾ.ಚಂದ್ರಶೇಖರ ಪಾಟೀಲ್ ಸಾಹಿತ್ಯ ಪ್ರಚಾರಕ್ಕೆ ಕ್ರಮ
- ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಗೆ ಅತ್ಯಾಧುನಿಕ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ ನಬಾರ್ಡ್ ನೆರವಿನೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ.
- ರೇಷ್ಮೆ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಕೆಜಿಗೆ 50 ರೂ.ಗಳಷ್ಟು ಹೆಚ್ಚಿಸಲಾಗುತ್ತದೆ.
- ಮಂಡ್ಯದ ಕೆ. ಆರ್. ಪೇಟೆಯಲ್ಲಿ ರೇಷ್ಮೆ ಎಲ್ಲಾ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಕೇಂದ್ರವನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಲಾಗುತ್ತದೆ.
- ಚಿಕ್ಕಮಗಳೂರು, ಹಂಪಿ ಹೆಲಿಪೋರ್ಟ್ ನಿರ್ಮಾಣ
- ಕರಾವಳಿಯಲ್ಲಿ ಬ್ಲೂ ಪ್ಲಾಸ್ಟಿಕ್ ನಿರ್ವಹಣಾ ಯೋಜನೆ
- ಹಾಸನ, ಚಿಕ್ಕಮಗಳೂರಿನಲ್ಲಿ ಆನೆ ಹಾವಳಿ ತಡೆಗಟ್ಟಲು ಕ್ರಮ
- ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ, ದೆಹಲಿ ಮಾದರಿಯಲ್ಲಿ ಮೊಹಲ್ಲಾ ಕ್ಲಿನಿಕ್ ಸ್ಥಾಪನೆ
- ಆಸಿಡ್ ಸಂತ್ರಸ್ಥೆಯರಿಗೆ 10000 ರೂ.ಮಾಸಾಶನ
- ಕಟ್ಟಡ ಕಾರ್ಮಿಕರಿಗೆ ಹೈಟೆಕ್ ಸಂಚಾರಿ ಕ್ಲಿನಿಕ್
- ಬಿಪಿಎಲ್ ಕಾರ್ಡ್ ದಾರರಿಗೆ 1 ಕೆಜಿ ಹೆಚ್ಚುವರಿ ರಾಗಿ/ಜೋಳ
- ರಾಮನಗರದ ಅರ್ಚಕರಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆರಂಭಿಸಲಾಗುತ್ತದೆ. ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.