ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಶಿಕ್ಷಣ ಅಂದರೆ ಕೇವಲ ಅಕ್ಷರ ಜ್ಞಾನ ಮಾತ್ರ ಅಲ್ಲ, ಅದರ ಜೊತೆ ನಿಸ್ವಾರ್ಥ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶತಮಾನದ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣದಿಂದಲೇ ವಿಶ್ವ ಗುರುತಿಸಿಕೊಳ್ಳುವಂತಾದರು ಎಂದು ಛಲವಾದಿ ಸಂಸ್ಥಾನ ಮಠ ಚಿತ್ರದುರ್ಗದ ಶ್ರೀಬಸವನಾಗಿ ದೇವ ಸ್ವಾಮೀಜಿ ಹೇಳಿದರು.
ಭಾನುವಾರ ಬಾರಕೂರು ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಇಂದು ಇಲ್ಲಿ ದೇವರ ಪ್ರಸಾದ ರೂಪವಾಗಿ ಪಡೆದ ವಿದ್ಯಾರ್ಥಿಗಳು ಮುಂದೆ ಈ ಸಮಾಜಕ್ಕೆ, ದೇಶಕ್ಕೆ ಜ್ಞಾನಿ, ವಿಜ್ಞಾನಿ, ತತ್ವ ಜ್ಞಾನಿಹೊರ ಹೊಮ್ಮುವಂತಾಗಲಿ ಎಂದರು.
ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲ್ ದಾಸ್ ಬಾರಕೂರು ಪ್ರಾಸ್ತಾವಿಕ ಮಾತನಾಡಿ, ರಾಜ್ಯದಾದ್ಯಂತ ಇರುವ ಮುಂಡಾಳ ಸಮಾಜದ ಪ್ರತೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪರಂಪರಾಗತವಾಗಿ ಬಂದ ಪೂಜೆಯ ಜೊತೆ ಆಡಳಿತ ಸಮಿತಿಯಲ್ಲೂ ಸಮಾಜದವರು ಪ್ರದಾನ ಪಾತ್ರ ವಹಿಸುವಂತಾಗಬೇಕು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ , ಉದ್ಯಮಿ ಡಾ, ಗೋವಿಂದ ಬಾಬು ಪೂಜಾರಿ, ಗಾಯಕ ಡಾ, ಗಣೇಶ್ ಗಂಗೊಳ್ಳಿಯವರನ್ನು ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ . ಪಿಯುಸಿ ಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಸಮಾಜದ ಅನೇಕ ಸಾಧಕರನ್ನು , ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು.
ಸಮಿತಿಯ ಖಜಾಂಚಿ ಉದಯ ಅಂಚನ್ ಎರ್ಮಾಳ್ , ಗುರಿಕಾರ ಕಮಲಾಕ್ಷ ಬಾರಕೂರು, ಅರ್ಚಕರಾದ ಪ್ರಭಾಕರ ಕಚ್ಚೂರು , ದಿನಕರ ಬಾಬು ಇನ್ನಿತರು ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರಕೂರು ಕಾರ್ಯಕ್ರಮ ನಿರೂಪಿಸಿ , ಶಿವರಾಜ ಮಲ್ಲಾರ್ ವಂದಿಸಿದರು ,