Connect with us

Hi, what are you looking for?

Diksoochi News

ರಾಜ್ಯ

ಎಣ್ಮಕಜೆ : ರಸ್ತೆ ಸಂಪರ್ಕವಿಲ್ಲದೆ ಕಂಗೆಟ್ಟಿದ್ದಾರೆ ಗ್ರಾಮಸ್ಥರು; ವಾಹನ ಸಂಚಾರ ಬಿಡಿ ನಡೆದಾಡಲು ಸುಗಮ ದಾರಿಯಿಲ್ಲ

1

ಅಡ್ಯನಡ್ಕ : ಸಾಮಾನ್ಯವಾಗಿ ಗಡಿ ನಾಡಿನ ಸಮಸ್ಯೆ ಎಂದರೆ ಅದೊಂದು ಬಗೆ ಹರಿಯದ ಸಮಸ್ಯೆ. ಒಬ್ಬ ವ್ಯಕ್ತಿಗೆ ವಾಸಿಸಲು ಯೋಗ್ಯ ಮನೆ ಹೇಗೆ ಬೇಕೋ ಹಾಗೆಯೇ ಮನೆಗೆ ಹೋಗುವ ದಾರಿಯೂ ಅಷ್ಟೇ ಮುಖ್ಯ. ಆದರೆ, ಕೇರಳ – ಕರ್ನಾಟಕ ಗಡಿಯಲ್ಲಿರುವ ಎಣ್ಮಕಜೆ ಗ್ರಾಮದ ಅಡ್ಯನಡ್ಕ ಎಂಬಲ್ಲಿ ಇದೊಂದು ಬಗೆ ಹರಿಸಲು ಸಾಧ್ಯವಾಗದೆ ಉಳಿದಿರುವ ಸಮಸ್ಯೆ. ಯಾವುದೇ ವಾಹನಗಳು ಸಂಚರಿಸಲು ಆಗದೆ ಉಳಿದಿರುವ ದಾರಿ ಮಾತ್ರ ಇದೆ. ಅಡ್ಯನಡ್ಕ ಪೇಟೆಗೆ ತಲುಪಬೇಕೆಂದರೆ ಸುಮಾರು ಒಂದು ಕಿಲೋ ಮೀಟರ್ ನಷ್ಟು ದೂರ ನಡೆಯಬೇಕು. ತಮ್ಮ ತಮ್ಮ ಮನೆಯಿಂದ ಪೇಟೆಗೆ ಹೋಗಬೇಕೆಂದರೆ ಕನಿಷ್ಠ ಪಕ್ಷ ನಡೆಯುವ ದಾರಿ ಆದರೂ ಸುಗಮವಾಗಿರಬೇಕು.


ಆದರೆ, ಇಲ್ಲಿ ಒಬ್ಬ ವ್ಯಕ್ತಿ ಅಸ್ವಸ್ಥತೆಯಿಂದ ಬಳಲಿ ಆಸ್ಪತ್ರೆಗೆ ಹೋಗಬೇಕೆಂದರೆ ದ್ವಿಚಕ್ರ ವಾಹನದಲ್ಲಾದರೂ ಕರೆದುಕೊಂಡು ಹೋಗುವಂತಿಲ್ಲ. ಆತ ನಡೆದೇ ಹೋಗಬೇಕು. ಇಲ್ಲವೇ ಯಾರಾದರೂ ಹೊತ್ತುಕೊಂಡು ಹೋಗಬೇಕು. ಇಂತಹ ದುಸ್ಥಿತಿಯಲ್ಲಿರುವ ರಸ್ತೆಯನ್ನು ಯಾರೂ ತಿರುಗಿ ನೋಡದೇ ಇರುವುದು ಗ್ರಾಮಸ್ಥರಿಗೆ ತೀರಾ ನೋವಿನ ವಿಚಾರ.

ಇದು 50 ವರ್ಷದ ಗೋಳು :


ಮಳೆಗಾಲದಲ್ಲಂತೂ ಇಲ್ಲಿನ ಪರಿಸ್ಥಿತಿ ಹೇಳ ತೀರದು. ದಿನ ಕಳೆದಂತೆ ಇಲ್ಲಿ ನಡೆದಾಡುವ ಮಣ್ಣಿನ ದಾರಿಯೂ ಸಂಚಾರಕ್ಕೆ ಯೋಗ್ಯವಲ್ಲದಂತೆ ಆಗಿದ್ದು, ದೈನದಿಂದ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಜನರು ಸುರಕ್ಷಿತವಾಗಿ ಇರಬೇಕೆಂದರೆ ಅಲ್ಲಿ ಸರಕಾರದ ಪಾತ್ರವು ಮಹತ್ವದ್ದು, ಸುಮಾರು 50 ವರ್ಷಗಳಿಂದ ಈ ವಿಷಯದ ಪರವಾಗಿ ಗ್ರಾಮಸ್ಥರು ದನಿ ಎತ್ತಿದರೂ, ಸಹಾಯ ಯಾಚಿಸಿದರೂ, ಹೋರಾಡಿದರೂ ಇದುವರೆಗೂ ಯಾವುದೇ ರೀತಿಯ ಪರಿಹಾರ ಜನ ನಾಯಕರಿಂದಲೋ, ಸರಕಾರದಿಂದಲೋ ಲಭಿಸದೆ ಇರುವುದು ವಿಷಾದಕರ ಸಂಗತಿ.

Advertisement. Scroll to continue reading.

ಸರಿಯಾದ ರಸ್ತೆ ಸೌಲಭ್ಯವಿಲ್ಲದೇ ವರ್ಷಗಳಿಂದ ಅನುಭವಿಸುವ ಈ ದುಸ್ಥಿತಿಗೆ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಲು ಇನ್ನಾದರೂ ಜನ ನಾಯಕರೋ, ಸರಕಾರವೋ ಮುಂದಾಗಲೇ ಬೇಕಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದನೆ ಅತೀ ಅಗತ್ಯವಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

ರಾಜ್ಯ

0 ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ಗೂಂಡಾ, ರೌಡಿ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇಂತಹವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆಂದು ಕಾಂಗ್ರೆಸ್‌ ಮುಖಂಡ ಯತೀಂದ್ರ...

ರಾಜ್ಯ

0 ಬೆಂಗಳೂರು : ಲೋಕಸಭಾ ಚುನಾವಣೆಗೆ ಕರ್ನಾಟಕದ ತನ್ನ ಪಾಲಿನ 25 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಕೊಕ್‌ ನೀಡಿ ಹೊಸಬರಿಗೆ ಕಮಲ ಪಡೆ ಮಣೆ ಹಾಕಿದೆ....

error: Content is protected !!