ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಜೀ ಅವರ ಕರೆಯಂತೆ ದೇಶಾದ್ಯಂತ “ಹರ್ ಘರ್ ತಿರಂಗ – ಮನೆ ಮನೆಯಲ್ಲಿ ತ್ರಿವರ್ಣ” ಅಭಿಯಾನ ನಡೆಯುತ್ತಿದ್ದು, ಬಿಜೆಪಿ ಯುವ ಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಪ್ರೌಢ ಶಾಲೆ ತೆಕ್ಕಟ್ಟೆಯ ವಿದ್ಯಾರ್ಥಿಗಳಿಗೆ ಕುಂದಾಪುರ ಬಿಜೆಪಿ ಯುವ ಮೋರ್ಚಾದ ವತಿಯಿಂದ ರಾಷ್ಟ್ರ ಧ್ವಜ ನೀಡಿ, ಸಿಹಿ ಹಂಚಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಯುವಮೋರ್ಚಾ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರಾ, ಯುವಮೋರ್ಚಾ ಕುಂದಾಪುರ ನಗರ ಮಹಾಶಕ್ತಿಕೇಂದ್ರ ಅಧ್ಯಕ್ಷ ಸಂಪತ್ ಶೇರಿಗಾರ್, ತೆಕ್ಕಟ್ಟೆ ಶಕ್ತಿಕೇಂದ್ರ ಕಿರಣ್ ಪೂಜಾರಿ, ತೆಕ್ಕಟ್ಟೆ ಪಂಚಾಯತ್ ಸದಸ್ಯರಾದ ವಿನೋದ್ ದೇವಾಡಿಗ, ಪ್ರತಿಭಾ ಚಾತ್ರ ,ಆನಂದ್ ಕಾಂಚನ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾಯಾ ಹೆಚ್. ಮತ್ತು ಪದವಿಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಪ್ರಕಾಶ್ ಶೆಟ್ಟಿ ಸಿಬ್ಬಂದಿ ವರ್ಗ, ಎಸ್ ಡಿ ಎಮ್ ಸಿ ಅಧ್ಯಕ್ಷ ರಾಘವೇಂದ್ರ ಪುರಾಣಿಕ್, ಯುವಮೋರ್ಚಾ ಕೆದೂರು ಶಕ್ತಿಕೇಂದ್ರ ಅಧ್ಯಕ್ಷ ಪ್ರತಾಪ್ ಶೆಟ್ಟಿ ಉಳ್ತೂರು, ಶ್ರಿನಾಥ್ ಶೆಟ್ಟಿ ತೆಕ್ಕಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಶ್ರೀಯಾನ್, ನಿರಂಜನ್ ದೇವಾಡಿಗ, ಸೀತಾರಾಮ ಶೆಟ್ಟಿ, ಯುವಮೋರ್ಚಾ ಹಾಲಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುದೀಪ್ ಶೆಟ್ಟಿ ಹಾಲಾಡಿ, ಸಾಲಿಗ್ರಾಮ ಮಹಾಶಕ್ತಿಕೇಂದ್ರದ ಅಧ್ಯಕ್ಷ ಅನಿಲ್ ಕುಮಾರ್ ಸಾಲಿಗ್ರಾಮ,ಬೀಜಾಡಿ ಮಹಾಶಕ್ತಿಕೇಂದ್ರ ಸದಸ್ಯ ಯುವಮೋರ್ಚಾ ಸದಸ್ಯ ವಿನೋದ್ ಬಂಗೇರಾ ಕೊಮೆ, ಸುನಿಲ್ ಪೂಜಾರಿ, ಹರ್ಷ , ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.