ಜಮಾಅತೆ ಇಸ್ಲಾಮೀ ಹಿಂದ್ ಕಾಪು ಇದರ ಆಶ್ರಯದಲ್ಲಿ ಉಚಿತ ಹಿಜಾಮ ಚಿಕಿತ್ಸಾ ಶಿಬಿರ
Published
0
ಕಾಪು: 75 ನೇ ಸ್ವಾತಂತ್ರ್ಯ ದಿನಾಚರಣೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಕಾಪು ಇದರ ಆಶ್ರಯದಲ್ಲಿ ಉಚಿತ ಹಿಜಾಮ ಶಿಬಿರವು ಭಾನುವಾರ ‘ಮಸ್ಜಿದ್ ಎ ತೈಬಾ ಬೆಳಪು’ ಇಲ್ಲಿ ನಡೆಯಿತು.
ಉಡುಪಿ ಸರಕಾರಿ ಆಸ್ಪತ್ರೆಯ ಆಯುಷ್ ವಿಭಾಗದ ವೈದ್ಯಾಧಿಕಾರಿ ಡಾ.ರುಕ್ಸಾರ್ ಅಂಜುಂ ಹಾಗು ಹಿಜಾಮ ತಜ್ಞರಾದ ಮುಫೀದ್ ಮಲ್ಲಾರ್ ಚಿಕಿತ್ಸೆಯ ನೇತ್ರತ್ವ ವಹಿಸಿದ್ದರು.ಮೌಲಾನಾ ಮುಹಮ್ಮದ್ ಯೂಸುಫ್ ಇವರು ಕುರಾನ್ ಪಠಿಸಿದರು.ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ಇದರ ಅಧ್ಯಕ್ಷರಾದ ಅನ್ವರ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ರಫೀಕ್ ಖಾನ್ ಅಧ್ಯಕ್ಷರು ಮಸ್ಜಿದ್ ಎ ತೈಬಾ,ಉದ್ಯಮಿ ಮುಸ್ತಾಕ್ ಇಬ್ರಾಹಿಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.