ಬಾರಕೂರು : ವಿದ್ಯಾರ್ಥಿ ಜೀವನದಲ್ಲಿ ನಾವೆಲ್ಲ ದೇಶ ಪ್ರೇಮವನ್ನು ಬೆಳೆಸಿಕೊಂಡು, ಸ್ವತಂತ್ರ ಹೋರಾಟ ದಲ್ಲಿ ಭಾಗವಹಿಸಿ ವೀರ ಮರಣ ವನ್ನು ಹೊಂದಿದ ವೀರ ಯೋಧರನ್ನು ಸ್ಮರಿಸಿಕೊಂಡು ನಾವು ಇಂದು ಆದರ್ಶ ಜೀವನ ನಡೆಸಬೇಕ ಎಂದು ಬಾರಕೂರು ವಿದ್ಯಾಭಿವೃದ್ಧಿನಿ ಸಂಘ ಸದಸ್ಯ ವಿಶ್ವನಾಥ್ ಶೆಟ್ಟಿ ಹೇಳಿದರು. ಅವರು ಶ್ರೀ ವಿಧ್ಯೇಶ ವಿದ್ಯಾ ಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರಕೂರು ನಲ್ಲಿ 75ನೇ ಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ವಿದ್ಯಾರ್ಥಿ ಗಳಿಗೆ ಕರೆ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾಗಿರುವ ಡಾ.ಬಿ.ಎಂ.ಸೋಮಯಾಜಿ, ಶಾಲಾ ಮುಖ್ಯಸ್ಥ ಪ್ರೀತಿ ರೇಖಾ, ಶಾಲಾ ಮುಖಂಡ ಸಮರ್ಥ್, ಶಾಲೆಯ ಎಲ್ಲಾ ಶಿಕ್ಷಕ, ಶಿಕ್ಷಕೇತರರು, ಪೋಷಕರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ಗಳು ಸ್ವಾತಂತ್ರ್ಯ ಹೋರಾಟಗಾರರ ಉಡುಪನ್ನು ಧರಿಸಿ ಕಾರ್ಯಕ್ರಮ ವನ್ನು ಮೆರಗು ಗೊಳಿಸಿದರು. ಈ ಕಾರ್ಯಕ್ರಮವನ್ನು ಅವನಿ ನಿರೂಪಿಸಿ, ಸ್ಪೂರ್ತಿ ಶೆಟ್ಟಿ ಸ್ವಾಗತಿಸಿ, ಸ್ಪೂರ್ತಿ ಕೆ. ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರಾರ್ಥನಾ ವಂದಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಕೆನರಾ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಆಗಿರುವ ವಜ್ರೇಶ್ವರಿ ಅವರು ಮತ್ತು ಬಿ.ಕೆ.ಕೊಠಾರಿ ಅವರು ಸಿಹಿತಿಂಡಿ ಕೊಡುಗೆಯನ್ನು ನೀಡಿದರು.
ಈ ಕಾರ್ಯಕ್ರಮವನ್ನು ಶಿಕ್ಷಕಿ ಜ್ಯೋತಿ ಶೆಟ್ಟಿ, ರಾಧಿಕಾ, ಜ್ಯೋತಿ ಸಂಯೋಜನೆ ಮಾಡಿದರು.