ನವದೆಹಲಿ : ಆಳವಾದ ಕಮರಿಗೆ ಬಸ್ ಬಿದ್ದ ಪರಿಣಾಮ ಆರು ಮಂದಿ ಐಟಿಬಿಪಿ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಬಸ್ ಚಂದನ್ವರಿಯಿಂದ ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಹೋಗುತ್ತಿತ್ತು. 39 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ಫೇಲ್ ಆದ ನಂತರ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ ಎನ್ನಲಾಗಿದೆ. ಪರಿಣಾಮ ಆರು ಐಟಿಬಿಪಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ
ಅಮರನಾಥ ಯಾತ್ರೆಯ ಕರ್ತವ್ಯದಿಂದ ಹಿಂದಿರುಗುತ್ತಿದ್ದ ಇತರ 37 ಜನರು ಗಂಭೀರ ಗಾಯಗೊಂಡಿದ್ದಾರೆ.
ಈ ಸಂಬಂಧ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಬಿಡುಗಡೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
’39 ಸಿಬ್ಬಂದಿಯನ್ನು (ಐಟಿಬಿಪಿಯ 37 ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ 2) ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಅದರ ವಿರಾಮಗಳು ವಿಫಲವಾದ ನಂತರ ರಸ್ತೆ ಬದಿಯ ನದಿಪಾತ್ರಕ್ಕೆ ಬಿದ್ದಿದೆ. ಸೈನಿಕರು ಚಂದನ್ವರಿಯಿಂದ ಪಹಲ್ಗಾಮ್ ಗೆ ತೆರಳುತ್ತಿದ್ದರು. ಸಾವುನೋವಿನ ಭೀತಿ ಎದುರಾಗಿದೆ’ ಎಂದು ಹೇಳಲಾಗಿದೆ
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಸ್ಡಿಎಚ್ ಪಹಲ್ಗಾಮ್ಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.