ದಿನಾಂಕ : ೧೯-೧೦-೨೩, ವಾರ: ಗುರುವಾರ, ತಿಥಿ : ಪಂಚಮಿ, ನಕ್ಷತ್ರ: ಜೇಷ್ಠ
ನೀವು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ಪ್ರೀತಿಯ ಸಂಬಂಧಗಳಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಶಿವನ ಆರಾಧಿಸಿ.
ವ್ಯವಹಾರದಲ್ಲಿ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ನೀವು ಪರಿಗಣಿಸಬಹುದು. ನೀವು ಸ್ನೇಹಿತರಿಂದ ಕೆಲವು ಶುಭ ಸುದ್ದಿಗಳನ್ನು ಪಡೆಯುತ್ತೀರಿ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಶಿವನ ನೆನೆಯಿರಿ.
ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಲು ನಿಮಗೆ ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು. ನಿಮ್ಮ ಪ್ರೇಮಿಯೊಂದಿಗೆ ಪ್ರವಾಸ ಕೈಗೊಳ್ಳಬಹುದು. ಹನುಮನ ನೆನೆಯಿರಿ.
ಇಂದು ಯಾರನ್ನೂ ಕುರುಡಾಗಿ ನಂಬಬೇಡಿ. ಪೂರ್ವಿಕರ ವ್ಯವಹಾರದಲ್ಲಿ ಸ್ವಲ್ಪ ನಿಧಾನವಾಗಬಹುದು. ಮಾನಸಿಕ ಒತ್ತಡವನ್ನು ತಪ್ಪಿಸಲು ತಾಳ್ಮೆಯಿಂದಿರಿ. ದುರ್ಗೆಯ ಆರಾಧಿಸಿ.
ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಸಣ್ಣ ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನ. ಪ್ರೇಮ ಸಂಬಂಧಗಳಲ್ಲಿ ಆಪ್ತತೆ ಹೆಚ್ಚಲಿದೆ. ವಿಷ್ಣುವನ್ನು ಆರಾಧಿಸಿ.
ಇಂದು ತುಂಬಾ ಬಿಡುವಿಲ್ಲದ ದಿನವಾಗಲಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಗೌರವ ಸಿಗಲಿದೆ. ಬದಲಾಗುತ್ತಿರುವ ಹವಾಮಾನದಿಂದಾಗಿ ಆರೋಗ್ಯ ಸ್ವಲ್ಪ ದುರ್ಬಲವಾಗಿರುತ್ತದೆ. ಶ್ರೀರಾಮನ ನೆನೆಯಿರಿ.
ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಸಂಕೀರ್ಣ ವಿಷಯಗಳನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಿ. ನವ ದಂಪತಿ ಪಿಕ್ನಿಕ್ ಹೋಗಬಹುದು. ಶನಿದೇವನ ನೆನೆಯಿರಿ.
ನಿಮ್ಮ ದೈನಂದಿನ ದಿನಚರಿಯನ್ನು ಸಮತೋಲನದಲ್ಲಿಡಿ. ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ದಿನವು ತುಂಬಾ ಶುಭಕರವಾಗಿದೆ. ಮನೆಯತ್ತ ಗಮನ ಇರಲಿ. ರುದ್ರಾಭಿಷೇಕ ಮಾಡಿಸಿ.
ಕೆಲಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವುದು ಸೂಕ್ತವಲ್ಲ. ಅಸೂಯೆಯಿಂದ ಜನರು ನಿಮ್ಮ ಕೆಲಸವನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಆಹಾರ ಕ್ರಮ ಸರಿಯಾಗಿಟ್ಟುಕೊಳ್ಳಿ. ವಿಘ್ನೇಶ್ವರನ ಆರಾಧಿಸಿ.
ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ನಿಮ್ಮ ನಾಯಕತ್ವದ ಸಾಮರ್ಥ್ಯಗಳನ್ನು ಪ್ರಶಂಸಿಸಲಾಗುತ್ತದೆ. ಕುಟುಂಬ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಗುರುವ ನೆನೆಯಿರಿ.
ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ. ಅಪರಿಚಿತರ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ. ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ. ಶನೈಶ್ಚರನ ನೆನೆಯಿರಿ.
ನಡೆಯುತ್ತಿರುವ ಕೆಲಸದಲ್ಲಿ ಹಠಾತ್ ಅಡಚಣೆ ಉಂಟಾಗಬಹುದು. ತಪ್ಪು ಜನರ ಸಹವಾಸದಿಂದ ದೂರವಿರಿ. ಹಣದ ವಿಷಯದಲ್ಲಿ ಕುಟುಂಬದಲ್ಲಿ ಅಶಾಂತಿ ಇರುತ್ತದೆ. ಮಂಜುನಾಥನ ನೆನೆಯಿರಿ.