ಚೆನ್ಮೈ : ಕುರ್ಚಿ ತರಲು ವಿಳಂಬ ಮಾಡಿದಕ್ಕೆ ಸಚಿವರೊಬ್ಬರು ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ.
ತಮಿಳುನಾಡು ಸಚಿವ ಎಸ್ಎಂ ನಾಸರ್ ಅವರು ತಿರುವಳ್ಳೂರಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದರು.
ಈ ಸಂದರ್ಭ ಕೆಲಸಗಾರ ತನಗೆ ಕುರ್ಚಿ ತರಲು ವಿಳಂಬ ಮಾಡಿದ ಕಾರಣ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ಎಸೆದಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಿರುವಳ್ಳೂರಿನಲ್ಲಿ ಬುಧವಾರ ನಡೆಯಲಿರುವ ಭಾಷಾ ಹೋರಾಟದ ಹೋರಾಟಗಾರರ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಇದರ ಪರಿಣಾಮವಾಗಿ ತಿರುವಳ್ಳೂರು ಐಸಿಎಂಆರ್ ಬಳಿ ವೇದಿಕೆ ನಿರ್ಮಿಸಲು 15 ಎಕರೆ ಭೂಮಿ ಸಿದ್ಧವಾಗುತ್ತಿದೆ. ಇದರ ಸಿದ್ಧತೆ ವೀಕ್ಷಿಸಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ.
#WATCH | Tamil Nadu Minister SM Nasar throws a stone at party workers in Tiruvallur for delaying in bringing chairs for him to sit pic.twitter.com/Q3f52Zjp7F— ANI (@ANI) January 24, 2023

