ಎಳ್ಳಾರೆ : ಶ್ರೀ ಜನಾರ್ದನ ಶಾಲೆ ಎಳ್ಳಾರೆ ಸಂಸ್ಥೆಯ ಪೋಷಕರ ಸಭೆ ನಡೆಯಿತು. ಪೋಷಕರ ಸಭೆಯ ಅಧ್ಯಕ್ಷತೆಯನ್ನು ಜನಾರ್ದನ ಶಾಲೆಯ ಅಧ್ಯಕ್ಷ ದಿನೇಶ್ ಕಿಣಿ ಎಳ್ಳಾರೆ ವಹಿಸಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷೆ, ಉಡುಪಿ ವಿದ್ಯಾಭಾರತಿ ಕರ್ನಾಟಕ ಉಪಾಧ್ಯಕ್ಷೆ ಪ್ರಿಯಾ ಯೋಗಿಶ್ ಮಲ್ಯ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ ಹೈಕಾಡಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಹೆಗ್ಡೆ ಇನ್ನಿತರರು ಉಪಸ್ಥಿತರಿದ್ದರು.
ಪೋಷಕರ ಸಭೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಮಾತೆಯರನ್ನು ಸೇರಿಸಿ ಮಾತೃಭಾರತಿ ರಚನೆ ಮಾಡಲಾಯಿತು. ಮಾತೃಭಾರತಿ ಸಮಿತಿಯ ಅಧ್ಯಕ್ಷರಾಗಿ ಸುಪ್ರಿಯಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಅಶ್ವಿನಿ. ಎಸ್. ಹೆಗ್ಡೆ, ಮುಖ್ಯೋಪಾಧ್ಯಾಯಿನಿ,
ಸಹಕಾರ್ಯದರ್ಶಿ ಪ್ರತಿಮಾ ರನ್ನ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅನಿತಾ ಅವರಿಗೆ ಜವಾಬ್ದಾರಿ ನೀಡಲಾಗಿದೆ.


ಮಾತೃಭಾರತಿ ಸಮಿತಿಯ ಪದಾಧಿಕಾರಿ ಸದಸ್ಯರು:
ಅಕ್ಷತಾ, ವಿದ್ಯಾ ವಾಗ್ಲೆ, ಆಶಾ
ಉಮಾ ನಾಯಕ್, ಪ್ರಣಮ್ಯ, ಸೌಮ್ಯ, ಪ್ರೇಮಲತಾ, ರೇಷ್ಮಾ, ಸವಿತಾ, ವಿನೋದ.
ಅಕ್ಷತಾ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
