ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವಿನ ಸಂಬಂಧ ಹಾಳಾಗಲು ಆ ಶಾಸಕಿಯೇ ಕಾರಣ. ಮಹಿಳೆಯ ಮೂಲಕ ಡಿ.ಕೆ. ಶಿವಕುಮಾರ್ ತೇಜೋವಧೆ ಮಾಡಿದ್ದಾರೆ. ಇದೊಂದು ವೈಯಕ್ತಿಕ ಯುದ್ಧ. ಡಿಕೆಶಿ ರಾಜಕಾರಣಿಯಾಗಲು ನಾಲಾಯಕ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂದು ಅವರಯ ಮಾತನಾಡಿದರು. ಡಿಕೆಶಿ, ಸೇರಿದಂತೆ ಕನಕಪುರದ ಗ್ರಾನೈಟ್ ವ್ಯಾಪಾರಿ ಸೇರಿದಂತರೆ ನನ್ನ ವಿರುದ್ದ ಆರೋಪ ಮಾಡಿರುವ ಮೈಸೂರು ಮೂಲದ ಇಬ್ಬರು ಶಾಸಕರನ್ನು ಬಂಧಿಸಬೇಕು. ಪ್ರಕರಣ ಸಂಬಂಧ ಸಿಬಿಐಗೆ ವಹಿಸಬೇಕು ಎಂದರು.
ಡಿಕೆಶಿ ಜಂಗ್ಲಿ ಮನುಷ್ಯ :

ಇದೇ ವೇಳೆ ಅವರು ನನ್ನ ಬಳಿ 20 ಸಿಡಿಗಳಿವೆ, ಎಲ್ಲವನ್ನು CBI ಗೆ ನೀಡುವೆ. 1985ರಲ್ಲಿ ಶಿವಕುಮಾರ್ ಅವರು ಚಪ್ಪಲಿ ಹಾಕೊಂಡು ಇದ್ದರು. ನಾನು ಆ ವೇಳೇಯಲ್ಲೆಯಲ್ಲಿ ರ್ಯಾಡೋ ವಾಚ್ ಮತ್ತು ಟೀ ಶರ್ಟ್ ಹಾಕೊಂಡು ಇದ್ದೆ. ಸಿಡಿಗೆ ಸಂಬಂಧಪಟ್ಟಂತೆ ಶ್ರವಣ್ ಮತ್ತು ನರೇಶ್ ಅವರನ್ನು ಕೂಡಲೇ ಬಂಧಿಸಬೇಕು ಎಂದರು.
ಇನ್ನೂ ಡಿಕೆಶಿ ಒಬ್ಬ ಜಂಗ್ಲಿ ಮನುಷ್ಯ ಎಂದು ವ್ಯಂಗ್ಯವಾಡಿದರು. ನಾನು ಡಿಕೆಶಿ ಅಣ್ಣ ತಮ್ಮಂದಿರ ಹಾಗೇ ಇದ್ದೇವೆ, ನಮ್ಮಿಬ್ಬರ ಸಂಬಂಧ ಹಾಳಾಗಲು ಗ್ರಾಮೀಣ ಶಾಸಕಿ ಎಂದಿದ್ದಾರೆ.
ನನ್ನ ಹೇಳಿಕೆಯನ್ನು ತಿರುಚಿ ಆಡಿಯೋವೊಂದನ್ನು ವೈರಲ್ ಆಗಿದ್ದು, ನಾಳೆ ಏನು ಆದ್ರು ಜಾತಿ ಸಂಘರ್ಷಕ್ಕೆ ಕಾರಣವಾದ್ರೆ ಅದಕ್ಕೆ ಇವರೇ ಕಾರಣ ಅಂತ ತಿಳಿಸಿದರು.
ಶುಗರ್ ಕಾರ್ಖನೆಯಲ್ಲಿ ಕೋಟ್ಯಾಂತರ ಅವ್ಯವಾಹರವಾಗಿದ್ದು, ಕಪ್ಪು ಹಣ ಬಿಳಿಯಾಗಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಆಡಿಯೋ ಇದೆ :
ನನ್ನ ಹತ್ತಿರ ಸಾವಿರಾರು ಕೋಟಿ ಇದೇ, ದುಬೈನಲ್ಲಿ, ಲಂಡನ್ನಲ್ಲಿ ಮನೆ ಇದೇ ಎಂದು ಡಿಕೆಶಿ ಹೇಳಿರುವ ಆಡಿಯೋ ನನ್ನ ಬಳಿ ಎಂದು ಹೇಳಿದ್ದಾರೆ. ಯಾರ ಬಳಿ ಅವರು ಮಾತನಾಡಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಗರ್ಲ್ಫ್ರೆಂಡ್ ಬಳಿ ಇರಬಹುದು ಅಂತ ಹೇಳಿದರು. ಈಗ ಆಡಿಯೋವನ್ನು ನಾನು ರಿಲೀಸ್ ಮಾಡುವುದಿಲ್ಲ, ನಾನು ದೆಹಲಿಗೆ ತೆರಳಿ ಸಿಬಿಐ ಡಿಕೆಶಿ ಅಂಡ್ ಟೀಮ್ ಬಂಧಿಸುವಂತೆ ಹೇಳುವಂತೆ ಅವರು ಹೇಳಿದರು.
ಸಿಡಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 120 ಮಂದಿಗಳ ಸಿಡಿಗಳನ್ನು ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

