Connect with us

Hi, what are you looking for?

ರಾಜ್ಯ

ಸುಮಲತಾ ಅಂಬರೀಶ್ ಸುದ್ದಿಗೋಷ್ಟಿ; ನನಗೆ ರಾಜಕೀಯ ಅನಿವಾರ್ಯ ಅಲ್ಲ, ಆಕಸ್ಮಿಕ ಎಂದ ಸಂಸದೆ

1

ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಇಂದು ಮಂಡ್ಯದ ಚಾಮುಂಡೇಶ್ವರ ನಗರದಲ್ಲಿರುವ ಸ್ವಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿದ್ದು, ಅಂಬರೀಶ್ ನೆನೆದು ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ಅವರು ನಾನು ಕುಟುಂಬ ರಾಜಕಾರಣಕ್ಕೆ ಬಂದಿಲ್ಲ ಅಂತ ಹೇಳಿದ ಅವರು ಆಕ್ಮಸಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದರು.

ನಾನು ರಾಜಕೀಯಕ್ಕೆ ಪ್ರವೇಶಿಸಿ 4 ವರ್ಷವಾಗಿದೆ. ಜನರ ಮಾತಿಗೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ. ಅಂಬರೀಷ್‌ಗಿದ್ದ ಪ್ರಭಾವಿಗಳ ಒಡನಾಟ ನನಗೂ ಇದೆ. ರಾಜಕೀಯ ಅನಿವಾರ್ಯವಲ್ಲ. ಆಕಸ್ಮಿಕವಾಗಿ ಬಂದೆ. ಸ್ವಾರ್ಥ, ಮಗನಿಗಾಗಿ ರಾಜಕೀಯ ಮಾಡಿಲ್ಲ. ಎಂಎಲ್‌ಸಿ ಆಗುವಂತೆ ಬಹಿರಂಗ ಆಹ್ವಾನ ಬಂದಿತ್ತು

ನಾನು ಯಾರು ಅಂಬರೀಶ್‌ ಅವರು ಅಂತ ಇಡೀ ಇಂಡಿಯಾಕ್ಕೆ ಗೊತ್ತು. ಇಂದು ರಾಜಕಾರಣ ಎನ್ನುವುದು ದುಡ್ಡು ಕೊಟ್ಟು ಮಾಡಿಕೊಳ್ಳುವ ಹಾಗೇ ಇದೆ. ಅವಶ್ಯಕತೆ ರಾಜಕಾರಣ ನನಗೆ ಬೇಕಾಗಿಲ್ಲ, ನನಗೆ ಯಾವುದು ಅನಿವಾರ್ಯತೆ ಇಲ್ಲ ಅಂತ ಹೇಳಿದರು. ಕೆಲವು ಮಾಧ್ಯಮಗಳಲ್ಲಿ ನನ್ನ ಹಾಗೂ ನನ್ನ ಮಗನ ರಾಜಕೀಯದ ಬಗ್ಗೆ ಹಲವು ಮಂದಿ ಪ್ರಸ್ತಾಪನೆ ಮಾಡಿದ್ದಾರೆ ಅಂಥ ಮಾಧ್ಯಮಗಳ ವಿರುದ್ದ ಕಿಡಿಕಾರಿದರು. ಇದೇ ವೇಳೆ ಅವರು ನನ್ನ ಚುನಾವಣೆ ಬಳಿಕ ನನ್ನ ವಿರುದ್ದ ಕಿಡಿಕಾರಿದರು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರ ವಿರುದ್ದ ಪರೋಕ್ಷವಾಗಿ ಉಲ್ಲೇಖಿಸಿದರು. ನನ್ನ ವಿರುದ್ದ ಮದ್ದೂರು, ಮೇಲುಕೋಟೆಯಲ್ಲಿ ನನ್ನ ವಿರುದ್ದ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿತ್ತು ಅಂತ ಹೇಳಿದರು.

Advertisement. Scroll to continue reading.

ಇದೇ ವೇಳೆ ಅವರು ತಮ್ಮ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಬೇಕಾಗಿದೆ, ನಮಗೆ ಮಂಡ್ಯದಲ್ಲಿ ರಾಜಕಾರಣ ಬೇಕಾಗಿಲ್ಲ, ನಮಗೆ ಬೇಕಾಗಿರುವುದು ಮಂಡ್ಯದ ಅಭಿವೃದ್ದಿ ಅಂತ ತಿಳಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೆಲವರು ನಮ್ಮ ಧ್ವನಿ ಅಡಗಿಸಲು ಮುಂದಾಗುತ್ತಿದ್ದಾರೆ ಎಂದು ದಳಪತಿಗಳ ವಿರುದ್ದ ಕಿಡಿಕಾರಿದ ಅವರು ಭದ್ರಕೋಟೆ ಅಂತೀರಾ ಏನು ಅಭಿವೃದ್ದಿ ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದರು.
ಮೈಶುಗರ್‌ ಮತ್ತು ಪಾಂಡವ ಪುರ ಸಕ್ಕರೆ ಕಾರ್ಖಾನೆ ಈಗ ಒಂದು ಹಂತಕ್ಕೆ ಬಂದಿದೆ ಎಂದು ಅವರು ಹೇಳಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

2 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

2 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!