ದಿನಾಂಕ : ೧೮-೦೫-೨೩, ವಾರ : ಗುರುವಾರ, ತಿಥಿ: ಚತುರ್ದಶಿ, ನಕ್ಷತ್ರ: ಆಶ್ವಿನಿ
ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಹಾಳಾಗುವ ಸಾಧ್ಯತೆಯಿದೆ. ಅಧಿಕ ಕೆಲಸದೊತ್ತಡ ಇರಲಿದೆ. ಮೇಲಾಧಿಕಾರಿಗಳಿಂದ ಬೆಂಬಲ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ವಿಚಾರದಲ್ಲಿ ಚಿಂತೆ. ನಾಗಾರಾಧನೆ ಮಾಡಿ.
ಇತರರೊಂದಿಗೆ ತಾಳ್ಮೆಯಿಂದ ವರ್ತಿಸಿ. ಕೆಲಸದ ಸ್ಥಳದಲ್ಲಿ ನಿಮಗೆ ಕಷ್ಟಕರವಾದ ಕೆಲಸವನ್ನು ವಹಿಸಲಾಗುವುದು. ನಿಮ್ಮ ಕಾರ್ಯ ವೈಖರಿ ಬಗ್ಗೆ ಪ್ರಶಂಸೆ ಕೇಳಿ ಬರಲಿದೆ. ನಿರ್ಲಕ್ಷ್ಯತನ ಬೇಡ. ರಾಮನ ನೆನೆಯಿರಿ.

ಇಂದು ನೀವು ಅನೇಕ ಕಾರ್ಯಗಳನ್ನು ಏಕಕಾಲದಲ್ಲಿ ಮಾಡಲು ಪ್ರಯತ್ನಿಸುತ್ತೀರಿ. ಕೆಲಸದಲ್ಲಿ ನಿಮಗೆ ದೊಡ್ಡ ಜವಾಬ್ದಾರಿ ಸಿಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದೂರ ಪ್ರಯಾಣ ಸಾಧ್ಯತೆ. ದೇವಿಯ ನೆನೆಯಿರಿ.
ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಕುಟುಂಬ ಸದಸ್ಯರಿಂದ ಮನಸ್ಸಿಗೆ ನೋವು. ಹಣದ ಕೊರತೆಯಿಂದ ಕೆಲವು ಕೆಲಸಗಳು ನಿಲ್ಲಬಹುದು. ಪೂರ್ವಿಕರ ಆಸ್ತಿ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ರಾಮನ ನೆನೆಯಿರಿ.
ಸಂಗಾತಿಯೊಂದಿಗೆ ಕಲಹ ಉಂಟಾಗುವ ಸಾಧ್ಯತೆ. ವ್ಯಾಪಾರದಲ್ಲಿ ಸಾಲ ಮಾಡುವುದನ್ನು ತಪ್ಪಿಸಿ. ಮನಸ್ಸಿನಲ್ಲಿ ಹೊಸ ಸೃಜನಶೀಲ ವಿಚಾರಗಳ ಪ್ರಭಾವ ಇರುತ್ತದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಶಿವನ ಆರಾಧಿಸಿ.
ಮನಸ್ಸಿನಲ್ಲಿ ತಿಳಿಯದ ಭಯವಿರಲಿದೆ. ಅನಾವಶ್ಯಕ ವಿಚಾರಗಳಿಂದ ದೂರವಿರಿ. ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಬೇಡಿ. ಆಸ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಮಂಜುನಾಥನ ನೆನೆಯಿರಿ.

ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಅಂದುಕೊಂಡ ಕಾರ್ಯ ಸಿದ್ಧಿ. ವಿದೇಶ ಪ್ರಯಾಣದಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗುವುದು. ನೀವು ಜನರಿಗೆ ಸಹಾಯ ಮಾಡಲು ಮುಂದಾಗುವಿರಿ. ವಿಷ್ಣುವನ್ನು ನೆನೆಯಿರಿ.
ನಿಮಗೆ ತುಂಬಾ ಉಲ್ಲಾಸದಾಯಕ ದಿನ. ಹಳೆಯ ನಷ್ಟವನ್ನು ಸರಿದೂಗಿಸಲಾಗುತ್ತದೆ. ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಬಹುದು. ಅವಿವಾಹಿತರ ವಿವಾಹ ಯೋಗ. ಶನೈಶ್ಚರನ ನೆನೆಯಿರಿ.
ವ್ಯಾಪಾರದಲ್ಲಿ ದೊಡ್ಡ ಆರ್ಥಿಕ ಲಾಭಗಳಿಸುವ ಸಾಧ್ಯತೆ. ಸ್ನೇಹಿತರೊಂದಿಗೆ ಗಂಭೀರ ವಿಷಯಗಳನ್ನು ಚರ್ಚಿಸುವಿರಿ. ನಿಮ್ಮ ವಿಧಾನವನ್ನು ಬದಲಾಯಿಸಲು ನೀವು ಪ್ರಯತ್ನಿಸಬಹುದು. ನೀವು ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ಶಿವನ ಆರಾಧಿಸಿ.
ಕುಟುಂಬದ ಯಾವುದೇ ಸದಸ್ಯರ ಮೇಲೆ ಕೋಪ ಸಾಧ್ಯತೆ. ತಾಳ್ಮೆ ಇರಲಿ. ಗಲಾಟೆಗೆ ಅವಕಾಶ ಕೊಡದಿರಿ. ಹವಾಮಾನ ಬದಲಾವಣೆಯಿಂದ ತೊಂದರೆ ಉಂಟಾಗಲಿದೆ. ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಗಣಪನ ನೆನೆಯಿರಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಗುರುವ ನೆನೆಯಿರಿ.
ಇಂದು ಇತರರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ಮನೆಯಲ್ಲಿ ನಕಾರಾತ್ಮಕ ವಾತಾವರಣ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಉತ್ತಮ. ಸಹೋದರರೊಂದಿಗೆ ವೈಮನಸ್ಯ ಉಂಟಾಗಬಹುದು. ರಾಯರ ಆರಾಧಿಸಿ.

