Connect with us

Hi, what are you looking for?

ಕರಾವಳಿ

ಕೋಟ: ಜಾಗದ ಪಾಲು ವಿಚಾರಕ್ಕೆ ಮಹಿಳೆ ಮೇಳೆ ಹಲ್ಲೆ, ಜೀವ ಬೆದರಿಕೆ

0

ಕೋಟ : ಜಾಗದ ವಿಚಾರಕ್ಕೆ ಸಂಬಂಧಿಸಿ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕೋಟ ಠಾಣಾ ವ್ಯಾಪ್ತಿಯ ಪಡುಕೆರೆ ಗ್ರಾಮದಲ್ಲಿ ವರದಿಯಾಗಿದೆ.
ಮೇ 17 ರಂದು ಬ್ರಹ್ಮಾವರದ ಪಡುಕೆರೆ ಗ್ರಾಮದ ಮಣೂರುವಿನ ಸರೋಜ ಎನ್ ಮೆಂಡನ್ ಅವರ ಮನೆಗೆ ಬಂದ ಅವರ ಗಂಡನ ಚಿಕ್ಕಮ್ಮ ಶಶಿಕಲ ಹಾಗೂ ಅವರ ಮಗ ಆದರ್ಶ ರವರು ದೇವರ ಕೆಲಸದ ವಿಚಾರವಾಗಿ ಕುಟುಂಬಸ್ಥರು ಚರ್ಚಿಸುವ ಸಲುವಾಗಿ ಬರಲು ಹೇಳಿದ್ದರು. ಅದರಂತೆ ಇವರು, ಪಡುಕೆರೆ ಗ್ರಾಮದ ರಾಮಚಂದ್ರ ಎಂಬುವವರ ಮನೆಯ ಬಳಿ ಹೋದಾಗ ಅಲ್ಲಿ ಆರೋಪಿತರಾದ ಶಶಿಕಲ, ಆದರ್ಶ, ಮತ್ತೊಬ್ಬ ಚಿಕ್ಕಮ್ಮ ಪಾರ್ವತಿ ಹಾಗೂ ಅವರ ಮಗ ನಿಖಿಲ್ ಬಂದಿದ್ದು, ಅವರೆಲ್ಲರೂ ಜಾಗದ ಪಾಲು ವಿಚಾರದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದರು. ಈ ವೇಳೆ ಸರೋಜ ಅವರು “ನಾನು ದೇವರ ಕೆಲಸದ ಬಗ್ಗೆ ಮಾತನಾಡಲು ಬಂದಿದ್ದು, ಪಾಲಿನ ಬಗ್ಗೆ ನನ್ನ ಗಂಡನಲ್ಲಿ ಮಾತನಾಡಿ” ಎಂದಾಗ ಆರೋಪಿತರೆಲ್ಲರೂ ಸರೋಜ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ. ಅಲ್ಲದೆ ಮೇ 18 ರಂದು ಮತ್ತೆ ಸರೋಜ ಅವರ ಮೈದುನ ಪ್ರಶಾಂತ ಮೆಂಡನ್ ಹಾಗೂ ಆದರ್ಶ ರವರು ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

2 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

2 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!