ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದೆ. ಅಕಾಡೆಮಿಯ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತ ಕೃತಿಗಳನ್ನು ಪ್ರಕಟಿಸಿದ್ದಾರೆ.
5 ಜನ ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರೊ.ಅಮೃತ ಸೋಮೇಶ್ವರ, ವಿದ್ವಾನ್. ಷಣ್ಮುಖಯ್ಯ ಅಕ್ಯೂರಮಠ, ಡಾ.ಕೆ.ಕೆಂಪೇಗೌಡ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಶ್ರೀ ಅಶೋಕಪುರಂ ಕೆ. ಗೋವಿಂದರಾಜು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ಐವತ್ತು ಸಾವಿರ ರೂ. ನಗದು, ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.
ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು :
ಶ್ರೀ ಪ್ರೇಮಶೇಖರ್, ಡಾ.ರಾಜಪ್ಪ ದಳವಾಯಿ, ಶ್ರೀಮತಿ ಬಿ.ಟಿ.ಜಾಹ್ನವಿ, ಪ್ರೊ.ಕಲ್ಯಾಣರಾವ್ ಜಿ.ಪಾಟೀಲ್, ಡಾ.ಜೆ.ಪಿ.ದೊಡ್ಡಮನಿ, ಡಾ.ಮೃತ್ಯುಂಜಯ ರುಮಾಲೆ, ಶ್ರೀ ಡಿ.ವಿ.ಪ್ರಹ್ಲಾದ್, ಡಾ.ಎಂ.ಎಸ್.ಆಶಾದೇವಿ, ಶ್ರೀ ಶಿವಾನಂದ ಕಳವೆ, ಶ್ರೀಮತಿ ವೀಣಾ ಬನ್ನಂಜೆ.
ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ.ನಗದು, ಪ್ರಮಾಣಪತ್ರವನ್ನು ಒಳಗೊಂಡಿದೆ.
2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು :
ಸತ್ಯಮಂಗಲ ಮಹಾದೇವ- ಪಂಚವರ್ಣದ ಹಂಸ(ಕಾವ್ಯ), ಸುಮಿತ್ ಮೇತ್ರಿ – ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ (ನವಕವಿಗಳ ಪ್ರಥಮ ಸಂಕಲನ), ವಸುದೇಂದ್ರ-ತೇಜೋತುಂಗಭದ್ರಾ(ಕಾದಂಬರಿ), ಲಕ್ಷ್ಮಣ ಬಾದಾಮಿ – ಒಂದು ಚಿಟಿಕೆ ಮಣ್ಣು(ಸಣ್ಣಕತೆ),
ಉಷಾ ನರಸಿಂಹನ್ ರ ಕಂಚುಗನ್ನಡಿ , (ನಾಟಕ),ರಘುನಾಥ ಚಹಾ-ಬೆಳ್ಳಿ ತೊರೆ(ಲಲಿತ ಪ್ರಬಂಧ), ಡಿ.ಜಿ.ಮಲ್ಲಿಕಾರ್ಜುನ – ಯೋರ್ದಾನ್ ಪಿರೆಮನ್(ಪ್ರವಾಸ ಸಾಹಿತ್ಯ), ಬಿ.ಎಂ.ರೋಹಿಣಿ-ನಾಗಂದಿಯೊಳಗಿಂದ(ಜೀವನಚರಿತ್ರೆ/ಆತ್ಮಕಥೆ), ಡಾ.ಗುರುಪಾದ ಮರಿಗುದ್ದಿ – ಪೊದೆಯಿಂದಿಳಿದ ಎದೆಯ ಹಕ್ಕಿ(ಸಾಹಿತ್ಯ ವಿಮರ್ಶೆ), ವಸುಮತಿ ಉಡುಪ – ಅಭಿಜಿತನ ಕತೆಗಳು(ಮಕ್ಕಳ ಸಾಹಿತ್ಯ), ಡಾ.ಕೆ.ಎಸ್.ಪವಿತ್ರ – ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು(ವಿಜ್ಞಾನ ಸಾಹಿತ್ಯ), ಡಾ.ಮಹಬಲೇಶ್ವರ ರಾವ್ – ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು (ಮಾನವಿಕ), ಡಾ.ಚನ್ನಬಸವಯ್ಯ ಹಿರೇಮಠ-ಅನಾವರಣ(ಸಂಶೋಧನೆ), ಗೀತಾ ಶೆಣೈ-ಕಾಳಿಗಂಗಾ (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ), ಧರಣೇಂದ್ರ ಕುರಕುರಿ-ಜ್ವಾಲಾಮುಖಿ ಪರ್(ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ), ಸುಧಾ ಆಡುಕಳ -ಬಕುಳದ ಬಾಗಿಲಿನಿಂದ(ಅಂಕಣ ಬರಹ/ವೈಚಾರಿಕ ಬರಹ), ಪ್ರೊ.ಡಿ.ವಿ.ಪರಮಶಿವಮೂರ್ತಿ, ಡಿ.ಸಿದ್ಧಗಂಗಯ್ಯ – ನೊಳಂಬರ ಶಾಸನಗಳು (ಸಂಕೀರ್ಣ), ಕಪಿಲ ಪಿ.ಹುಮನಾಬಾದೆ – ಹಾಣಾದಿ(ಲೇಖಕರ ಮೊದಲ ಸ್ವತಂತ್ರ ಕೃತಿ)
ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ಬಹುಮಾನ ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
ದತ್ತಿ ಬಹುಮಾನ ಪುರಸ್ಕೃತರು :
ಅನುಪಮಾ ಪ್ರಸಾದ್ – ಪಕ್ಕಿ ಹಳ್ಳದ ಹಾದಿಗುಂಟ(ಕಾದಂಬರಿ-ಚದುರಂಗ ದತ್ತಿನಿಧಿ ಬಹುಮಾನ), ನೀತಾ ರಾವ್ – ಹತ್ತನೇ ಕ್ಲಾಸಿನ ಹುಡುಗಿಯರು(ಲಲಿತ ಪ್ರಬಂಧ-ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ), ಡಾ. ಬಿ. ಪ್ರಭಾಕರ ಶಿಶಿಲ – ಬೊಗಸೆ ತುಂಬಾ ಕನಸು(ಜೀವನ ಚರಿತ್ರೆ- ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ), ಡಾ.ಎಂ.ಉಷಾ-ಕನ್ನಡ ಮ್ಯಾಕ್ ಬೆತ್ ಗಳು(ಸಾಹಿತ್ಯ ವಿಮರ್ಶೆ-ಪಿ.ಶ್ರೀನಿವಾಸ ರಾವ್ ದತ್ತಿನಿಧಿ ಬಹುಮಾನ), ಜಿ.ಎನ್. ರಂಗನಾಥ ರಾವ್ – ಶ್ರೀ ಮಹಾಭಾರತ 1,2,3 ಮತ್ತು 4(ಅನುವಾದ – ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ), ಭಾಗ್ಯಜ್ಯೋತಿ ಹಿರೇಮಠ – ಪಾದಗಂಧ(ಲೇಖಕರ ಮೊದಲ ಸ್ವತಂತ್ರ ಕೃತಿ-ಮಧುರಚೆನ್ನ ದತ್ತಿನಿಧಿ ಬಹುಮಾನ), ಪ್ರಮೋದ್ ಮುತಾಲಿಕ್ – ಬಿಯೊಂಡ್ ಲೈಫ್ (ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ – ಅಮೆರಿಕನ್ನಡ ದತ್ತಿನಿಧಿ ಬಹುಮಾನ), ಮಲ್ಲಿಕಾರ್ಜುನ ಕಡಕೋಳ – ಯಡ್ರಾಮಿ ಸೀಮೆ ಕಥನಗಳು(ವೈಚಾರಿಕ/ಅಂಕಣಬರಹ-ಬಿ.ವಿ.ವೀರಭದ್ರಪ್ಪ ದತ್ತಿನಿಧಿ), ಲಕ್ಷ್ಮೀಕಾಂತ್ ಪಾಟೀಲ್ – ಶ್ರೀ ಪ್ರಸನ್ನವೆಂಕಟದಾಸರ್ಯಕೃತ, ಶ್ರೀ ಲಕ್ಷ್ಮೀದೇವಿ ಅಪ್ರಕಟಿತ ಸ್ತುತಿ ರತ್ನಗಳು(ದಾಸ ಸಾಹಿತ್ಯ – ಶ್ರೀಮತಿ ಜಲಜಾ ಶ್ರೀಪತಿಆಚಾರ್ಯ ಗಂಗೂರ್ ದತ್ತಿನಿಧಿ ಬಹುಮಾನ)