ಉಡುಪಿ : ತುಳು ಕೂಟ ಉಡುಪಿ ಮತ್ತು ಕ್ಷಿಪ್ರ ಪದ್ಮ ಪ್ರಕಾಶನ ದೊಡ್ಡನಗುಡ್ಡೆ ಆಶ್ರಯದಲ್ಲಿ ಕವಿಗೋಷ್ಠಿ ಹಾಗೂ ವಾಸಂತಿ ಅಂಬಲಪಾಡಿ ಅವರ ‘ಪಿಜಿನ್ ದ ಬಾಸೆ ನಿಗಲೆಗ್ ತೆರಿಯುಂಡಾ’ ತುಳು ಕವನ ಸಂಕಲನ ಇಂದು ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿಯಲ್ಲಿ ನಡೆಯಿತು.
ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಪುಸ್ತಕ ಬಿಡುಗಡೆಗೊಳಿಸಿದರು.
ಖ್ಯಾತ ವಿಮರ್ಶಕ, ಸಾಹಿತಿ, ಚಿಂತಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಪುಸ್ತಕ ಪರಿಚಯ ಮಾಡಿದರು.
ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಸೈಂಟ್ ಸಿಸಿಲಿ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ರಚನಾ ಎ.ಸಿ, ಮುಂಬಯಿನ ಶಿಕ್ಷಕಿ ಹರಿಣಾಕ್ಷಿ ಲಲಿತ್ ರಾಜ್ ಸುವರ್ಣ ಉಪಸ್ಥಿತರಿದ್ದರು.
ಅಮೃತ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ :
ಈ ಸಂದರ್ಭ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಉಪ್ಪುಂದ ಸ.ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯಾದವ ಕರ್ಕೇರಾ ವಹಿಸಿದ್ದರು.
ಡಾ.ಪಿ.ಕೃಷ್ಣಪ್ರಸಾದ್, ಯಶೋದಾ ಕೇಶವ್, ದಯಾನಂದ ಶೆಟ್ಟಿ ದೆಂದೂರ್ ಕಟ್ಟೆ, ಪ್ರಕಾಶ್ ಸುವರ್ಣ ಕಟಪಾಡಿ, ಅಮಿತಾಂಜಲಿ ಕಿರಣ್, ಉಮೇಶ್ ಆಚಾರ್ಯ, ಅಮೃತಾ ಸಂದೀಪ, ಮಲ್ಲಿಕಾ ಎಚ್. ಶೆಟ್ಟಿ, ಜ್ಯೋತಿ ಎಸ್. ದೇವಾಡಿಗ, ಪೂರ್ಣಿಮಾ ಶೆಟ್ಟಿ, ಸುಷ್ಮಾ ಎ. ಎಸ್ ಕವಿಗೋಷ್ಠಿಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ವಿದ್ಯಾ ಸರಸ್ವತಿ ನಿರೂಪಿಸಿದರು.

