Connect with us

Hi, what are you looking for?

ಕ್ರೀಡೆ

50 ರನ್‌ಗೆ ಆಲೌಟ್!: ಹಲವು ಕೆಟ್ಟ ದಾಖಲೆ ಬರೆದ ಲಂಕಾ

0

ಏಷ್ಯಾಕಪ್ 2023 : ಸಿರಾಜ್ ಮಾರಕ ದಾಳಿಯಿಂದ ಏಷ್ಯಾಕಪ್ ಫೈನಲ್‌ನಲ್ಲಿ ಲಂಕಾ ತಂಡ ಕೇವಲ 50 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದ್ದು, ಅವು ಹೀಗಿವೆ…

  • ಇಂದಿನ ಪಂದ್ಯದಲ್ಲಿ 50ರನ್‌ಗೆ ಆಲೌಟ್ ಆಗುವ ಮೂಲಕಭಾರತ ವಿರುದ್ಧ ಅತೀ ಕಡಿಮೆ ಮೊತ್ತ ಪೇರಿಸಿದ ತಂಡ ಎಂಬ ಕೆಟ್ಟ ದಾಖಲೆ ಶ್ರೀಲಂಕಾ ಪಾಲಾಯಿತು.
  • ಇದಕ್ಕೂ ಮೊದಲು ಬಾಂಗ್ಲಾದೇಶ 58 ರನ್‌ಗೆ ಆಲೌಟ್ ಆಗಿದ್ದು ದಾಖಲೆ ಯಾಗಿತ್ತು.
  • ಏಕದಿನ ಟೂರ್ನಿಯ ಫೈನಲ್‌ನಲ್ಲಿ ದಾಖಲಾದ ಕಡಿಮೆ ಮೊತ್ತ ಎಂಬ ದಾಖಲೆ ಕೂಡ ಈ ಪಂದ್ಯದಲ್ಲಿ ನಿರ್ಮಾಣವಾಯಿತು.
    ಇದಕ್ಕೂ ಮೊದಲು ಭಾರತ, ಶ್ರೀಲಂಕಾ ವಿರುದ್ಧ 54ರನ್‌ ಪೇರಿಸಿದ್ದು ದಾಖಲೆಯಾಗಿತ್ತು.
  • ಸಿರಾಜ್ ಅವರ 6/21 ವಿಕೆಟ್ ಎನ್ನುವುದು ಭಾರತದ ಪರ ಏಕದಿನದ ನಾಲ್ಕನೇ ಅತ್ಯುತ್ತಮ ಪ್ರದರ್ಶನವಾಗಿದೆ.
    ಉಳಿದಂತೆ ಸ್ಟುವರ್ಟ್ ಬಿನ್ನಿ ಬಾಂಗ್ಲಾ ವಿರುದ್ಧ 4ರನ್‌ಗೆ 6 ವಿಕೆಟ್, ಕುಂಬ್ಳೆ, ವಿಂಡೀಸ್ ವಿರುದ್ಧ 12 ರನ್‌ಗೆ 6 ವಿಕೆಟ್, ಬುಮ್ರಾ, ಇಂಗ್ಲೆಂಡ್ ವಿರುದ್ಧ 19 ರನ್‌ಗೆ 6 ವಿಕೆಟ್ ಪಡೆದಿರುವುದು ದಾಖಲೆಯಾಗಿದೆ‌.
  • ಸಿರಾಜ್ 21 ರನ್‌ಗೆ 6 ವಿಕೆಟ್ ಎನ್ನುವುದು ಶ್ರೀಲಂಕಾ ವಿರುದ್ಧ ಬೌಲರದ ಒಬ್ಬನ ಶ್ರೇಷ್ಠ ಸಾಧನೆಯಾಹಗಿದೆ. ಈ ಮೂಲಕ ವಕಾರ್ ಯೂನಿಸ್ (26 ರನ್‌ಗೆ 6 ವಿಕೆಟ್) ದಾಖಲೆ ಪತನವಾಯಿತು.
  • ಇದು ಶ್ರೀಲಂಕಾದ ಎರಡನೇ ಕನಿಷ್ಠ ಏಕದಿನ ಮೊತ್ತವಾಗಿದೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ 43 ರನ್‌ಗೆ ಆಲೌಟ್ ಆಗಿದ್ದು ಲಂಕಾದ ಕನಿಷ್ಠ ಏಕದಿನ ಮೊತ್ತವಾಗಿದೆ.
  • ಐಸಿಸಿ ಫುಲ್ ಮೆಂಬರ್ ತಂಡ ಅತ್ಯಂತ ಕಡಿಮೆ ಓವರ್‌ನಲ್ಲಿ ಆಲೌಟ್ ಆದ ಎರಡನೇ ತಂಡ ಎಂಬ ಕುಖ್ಯಾತಿ ಶ್ರೀಲಂಕಾ ಪಾಲಾಯಿತು. ಲಂಕಾ ಈ ಪಂದ್ಯದಲ್ಲಿ 15.2 ಓವರ್‌ನಲ್ಲಿ ಆಲೌಟ್ ಆಯಿತು.
    2017ರಲ್ಲಿ ಜಿಂಬಾಬ್ವೆ, ಆಫ್ಘಾನಿಸ್ತಾನದ ವಿರುದ್ಧ 13.5 ಓವರ್‌ಗಳಲ್ಲಿ ಆಲೌಟ್‌ ಆಗಿರುವುದು ದಾಖಲೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ‍‌‌ಹಾವಂಜೆ : ಇಲ್ಲಿನ ಅಂಗಡಿಬೆಟ್ಟುವಿನ ಕಪ್ಪೆಟ್ಟು ಪ್ರಸಾದ್ ಶೆಟ್ಟಿ ಅವರ ಮನೆಯ ಕಂಪೌಂಡ್‌ಗೆ ತಾಗಿ ರಸ್ತೆಯ ಮಧ್ಯದಲ್ಲಿ ಹೊಂಡವೊಂದು ಕಳೆದ ಒಂದು ತಿಂಗಳ ಹಿಂದೆಯೇ ಕಂಡುಬಂದಿದ್ದರೂ ಪ್ರಮುಖ ರಸ್ತೆ ಯಾಗಿರುವುದರಿಂದ, ಸ್ಥಳೀಯ...

ಕರಾವಳಿ

0 ಬೆಳ್ತಂಗಡಿ: ಮನೆಯ ಸಮೀಪದಲ್ಲಿದ್ದ ಮರವನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಮೈ ಮೇಲೆ ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ...

ಕರಾವಳಿ

0 ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಕುರಿತಂತೆ ವ್ಯವಸ್ಥಿತವಾಗಿ ಸಮಗ್ರ ನಡೆಸಿ, ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಾಧನ ಸಲಕರಣಗಳನ್ನು ಅಲಿಂಕೋ ಮೂಲಕ ಸಂಪೂರ್ಣ ಉಚಿತವಾಗಿ ವಿತರಿಸಲಾಗುವುದು...

Uncategorized

0 ಬ್ರಹ್ಮಾವರ : ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುದಿಗ್ರಾಮದ ಬೈದ ಬೆಟ್ಟು ಎಂಬಲ್ಲಿ ನಡೆದಿದೆ. ಚಂದ್ರ(39) ಆತ್ಮಹತ್ಯೆ ಮಾಡಿಕೊಂಡವರು. ಚಂದ್ರ ಕಳೆದ 4 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು....