ಬೆಂಗಳೂರು : ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಡಿ. ಚೆನ್ನಣ್ಣನವರ್ ಸೇರಿದಂತೆ ಒಟ್ಟು 12 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರವಿ ಚನ್ನಣ್ಣನವರ್ ಅವರನ್ನು ಬೆಂಗಳೂರಿನ ಸಿಐಡಿ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಎಸ್ ಪಿ ಹುದ್ದೆಯಿಂದ ಆರ್.ಚೇತನ್ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಕೋಲಾರ ಎಸ್ ಪಿ ಆಗಿದ್ದ ಕಾರ್ತಿಕ್ ರೆಡ್ಡಿ ಅವರನ್ನು ವಯರ್ ಲೆಸ್ ವಿಭಾಗದ ಎಸ್ ಪಿ ಆಗಿ ನೇಮಕ ಮಾಡಲಾಗಿದೆ. ರಾಹುಲ್ ಕುಮಾರ್ ಶಹಪುರ್ವಾಡ ಅವರನ್ನು ಬೆಂಗಳೂರಿನ ಸಿಐಟಿ ಎಸ್ ಪಿ ಹುದ್ದೆಯಿಂದ ವರ್ಗಾವಣೆ ಮಾಡಿ ತುಮಕೂರು ಜಿಲ್ಲಾ ಎಸ್ ಪಿ ಆಗಿ ನೇಮಿಸಲಾಗಿದೆ. ಹನುಮಂತರಾಯ ಅವರನ್ನು ದಾವಣಗೆರೆ ಎಸ್ ಪಿ ಹುದ್ದೆಯಿಂದ ಹಾವೇರಿ ಜಿಲ್ಲಾ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಡಾ.ಎ.ಎನ್.ಪ್ರಕಾಶ್ ಗೌಡ ಅವರನ್ನು ಮೈಸೂರು ನಗರ ಲಾ ಆಂಡ್ ಆರ್ಡರ್ ಡಿಸಿಪಿ ಹುದ್ದೆಯಿಂದ ಬೆಂಗಳೂರಿನ ಇಂಟರ್ ಸೆಕ್ಯೂರಿಟಿ ವಿಭಾಗದ ಎಸ್ ಪಿಯಾಹಿ, ಕೆ.ಜಿ.ದೇಔರಾಜು ಅವರನ್ನು ಹಾವೇರಿ ಎಸ್ ಪಿ ಹುದ್ದೆಯಿಂದ ಬೆಂಗಳೂರಿನ ಸಿಐಟಿಯ ಎಸ್ ಆಗಿ, ಸಿಬಿ ರ್ಯಾಶಂತ್ ಅವರನ್ನು ಮೈಸೂರು ಎಸ್ ಪಿ ಹುದ್ದೆಯಿಂದ ವರ್ಗಾವಣೆ ಮಾಡಿ, ದಾವಣಗೆರೆ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ದೆಕ್ಕ ಕಿಶೋರ್ ಬಾಬು ಅವರನ್ನು ಕಲುಬುರ್ಗಿ ಲಾ ಆಂಡ್ ಆರ್ಡರ್ ಡಿಸಿಪಿ ಹುದ್ದೆಯಿಂದ ಕೋಲಾರ ಎಸ್ ಆಗಿ, ಕೋನ ವಂಶಿ ಕೃಷ್ಣ ಅವರನ್ನು ತುಮಕೂರು ಎಸ್ ಪಿ ಹುದ್ದೆಯಿಂದ ಬೆಂಗಳೂರು ಗ್ರಾಮಾಂತರ ಎಸ್ ಪಿ ಆಗಿ ನೇಮಿಸಲಾಗಿದೆ. ಬೆಂಗಳೂರಿನ ಇಂಟರ್ ಸೆಕ್ಯೂರಿಟಿ ಡಿವಿಸನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರದೀಪ್ ಗುಂಟಿ ಮೈಸೂರು ನಗರ ಲಾ ಆಂಡ್ ಆರ್ಡರ್ ಡಿಸಿಪಿ ಆಗಿ, ಅದ್ದೂರು ಶ್ರೀನಿವಾಸಲು ಅವರನ್ನು ಬೆಂಗಳೂರಿನ ವೈರ್ ಲೆಸ್ ವಿಭಾಗದ ಎಸ್ ಪಿ ಹುದ್ದೆಯಿಂದ ಕಲ್ಬುರ್ಗಿಯ ಲಾ ಆಂಡ್ ಆರ್ಡರ್ ಡಿಸಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
You May Also Like
ರಾಜ್ಯ
1 ಬೆಂಗಳೂರು: ಪ್ರಧಾನಿ ಮೋದಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು...
ರಾಷ್ಟ್ರೀಯ
1 ಬೆಂಗಳೂರು: ಎನ್ಡಿಎ ಮೈತ್ರಿಕೂಟದಡಿ ‘ಅಬ್ ಕಿ ಬಾರ್ 400 ಪಾರ್’ ಘೋಷಣೆ ಮೊಳಗಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ತಲುಪಲು ಟಿಕೆಟ್ ಹಂಚಿಕೆ...
ಅರೆ ಹೌದಾ!
0 ಬೆಂಗಳೂರು: ಫ್ರೀ ಟಿಕೆಟ್ ಎಂದು ಪಕ್ಷಿಗಳನ್ನು ಜೊತೆಗಿಟ್ಟುಕೊಂಡು ಬಸ್ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್ ನೀಡಿದ ಟಿಕೆಟ್ ದೊಡ್ಡ ಶಾಕ್ ನೀಡಿದೆ. ಪಕ್ಷಿಗಳಿಗೆ ಟಿಕೆಟ್ ನೀಡಬೇಕೆನ್ನುವುದು ನಿಯಮವಾದರೂ ನೀಡಿದ ಟಿಕೆಟ್...
ರಾಷ್ಟ್ರೀಯ
1 ಬೆಂಗಳೂರು: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಡಾಲರ್ (ಅಂದಾಜು 133.54 ಕೋಟಿ ರು.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ...
ರಾಷ್ಟ್ರೀಯ
0 ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು...