ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನಾಡ್ಪಾಲು ಗ್ರಾಮಪಂಚಾಯತ್ ವ್ಯಾಪ್ತಿಯ ಕಸಾನ್ ಮಕ್ಕಿ ಸಮೀಪದ ಒದುರು ಎಂಬಲ್ಲಿ ಮಂಗಳೂರು ನೋಂದಾಯಿತ ಬೊಲೆರೋ ಪಿಕಪ್ ನಲ್ಲಿ ಹಿಂಸಾತ್ಮಕ ರೀತಿಯಲ್ಲಿ 4 ಜಾನುವಾರಗಳನ್ನು ವಧೆ ಮಾಡಲು ಕಳ್ಳರು ವಾಹನದಲ್ಲಿ ತುಂಬಿಕೊಂಡು ಹೋಗುವಾಗ ಸ್ಥಳೀಯರ ಖಚಿತ ಮಾಹಿತಿಯ ಮೇರೆಗೆ ಹೆಬ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಹಸುಗಳನ್ನು ರಕ್ಷಿಸಿದ್ದಾರೆ.
ಕಾರ್ಯಾಚರಣೆ ವೇಳೆ ವಾಹನವನ್ನು ಹಿಂಬಾಲಿಸುವಾಗ ರಸ್ತೆ ಬದಿಯಲ್ಲಿ ಹೂತು ಹೋದ ಕಾರಣ ಆರೋಪಿಗಳು ಪಿಕಪ್ ಕೀ ಸಮೇತ ಹಿಡಿದುಕೊಂಡು ಪರಾರಿಯಾಗಿದ್ದಾರೆ. ಹಲವು ದಿನಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ದಾರಿ ಗುರುತಿಸಲಾಗದೆ ಪಿಕಪ್ ನ ಚಕ್ರ ಕೆಸರಿನಲ್ಲಿ ಹೂತು ಹೋದ ಕಾರಣ ನಾಲ್ಕು ದನಗಳನ್ನು ರಕ್ಷಿಸಲು ಸಾಧ್ಯವಾಗಿದೆ. ದನಗಳು ಹಾಗೂ ಬೊಲೆರೋ ಪಿಕಪ್ ಪೊಲೀಸರ ವಶದಲ್ಲಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ. ಹೆಬ್ರಿ ಠಾಣಾಧಿಕಾರಿ ಮಹೇಶ್ T.M ನೇತೃತ್ವದಲ್ಲಿ ಮುಂದಿನ ತನಿಖೆ ನಡೆಸಲಾಗುತ್ತಿದೆ.
Advertisement. Scroll to continue reading.