ಹೆಬ್ರಿ : ರೈತರನ್ನು ಪ್ರೋತ್ಸಾಹಿಸುವ ವಿನೂತನವಾದ ರೈತ ಮಿತ್ರ ಬಾಡಿಗೆ ಟ್ರ್ಯಾಕ್ಟರ್ ಯೋಜನೆಯನ್ನು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘವು ಜಾರಿಗೆ ತಂದಿರುವುದು ಮಾದರಿಯಾಗಿದೆ, ಸಂಘದ ರೈತ ಸದಸ್ಯರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಮುಂದೆ ಜಿಲ್ಲೆಯಾದ್ಯಂತ ಸಹಕಾರಿ ಸಂಘಗಳು ಈ ಯೋಜನೆ ಜಾರಿಗೆ ತಂದರೆ ಎಲ್ಲರಿಗೂ ಪ್ರಯೋಜನವಾಗಿ ಕೃಷಿ ಕಾರ್ಯಗಳು ಮತ್ತೇ ಆರಂಭವಾಗಿದೆ. ಯುವಕರು ಕೂಡ ಭತ್ತದ ಬೇಸಾಯದಲ್ಲಿ ತೊಡಗಿಕೊಳ್ಳಲು ಪ್ರೇರಣೆ ದೊರೆಯುತ್ತದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಅವರು ಗುರುವಾರ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಿನೂತವಾದ ರೈತ ಮಿತ್ರ ಬಾಡಿಗೆ ಟ್ರ್ಯಾಕ್ಟರ್ ಯೋಜನೆಗೆ ಗುರುವಾರ ಶಾಸಕ ಸುನೀಲ್ ಕುಮಾರ್ ಚಾಲನೆ ನೀಡಿದರು
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ.ಅಡ್ಯಂತಾಯ ಮಾತನಾಡಿ, ರೈತ ಸದಸ್ಯರಿಗೆ ವಿಶೇಷವಾದ ಸೇವೆ ನೀಡಬೇಕು ಎನ್ನುವ ಕಲ್ಪನೆಯಿಂದ ಲಾಭದ ದೃಷ್ಠಿ ನೋಡದೇ ರೈತಮಿತ್ರ ಯೋಜನೆ ಮಾಡಿದ್ದೇವೆ. ಯುವಕರು 5 ಜನರ ತಂಡದಲ್ಲಿ ಭತ್ತದ ಬೇಸಾಯ ಮಾಡಲು ಮುಂದೆ ಬಂದರೆ ನಮ್ಮ ನಾಯಕ ಪ್ರವೀಣ್ ಬಲ್ಲಾಳ್ ನೇತೃತ್ವದಲ್ಲಿ ಜಮೀನು ಒದಗಿಸುವ ಕೆಲಸ ಮಾಡುತ್ತೇವೆ. ಎಲ್ಲರೂ ಈ ಅವಕಾಶದ ಸದುಪಯೋಗವನ್ನು ನಡೆದುಕೊಂಡು ಕೃಷಿಯತ್ತ ಗಮನ ಕೊಡಿ ಎಂದರು.
ಹೆಬ್ರಿಯ ಮುಖಂಡ ಎಚ್. ಪ್ರವೀಣ್ ಬಲ್ಲಾಳ್, ಹೆಬ್ರಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು, ಉದ್ಯಮಿ ಎಚ್.ಸತೀಶ್ ಪೈ, ಸಂಘದ ಉಪಾಧ್ಯಕ್ಷ ಪುಟ್ಟಣ್ಣ ಭಟ್, ಕಾರ್ಯನಿರ್ವಾಹಣಾಧಿಕಾರಿ ಶೀನ ನಾಯ್ಕೆ, ನಿರ್ದೇಶಕರಾದ ಭೂತಗುಂಡಿ ಕರುಣಾಕರ ಶೆಟ್ಟಿ, ಸುಧಾ ಗಣೇಶ್ ನಾಯಕ್, ಸುಧಾಕರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.