ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಭಾರತೀಯ ಜನತಾ ಪಾರ್ಟಿ ಕುಂದಾಪುರ, ಯುವಮೋರ್ಚಾ ಕುಂದಾಪುರ ನೇತೃತ್ವದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಯವರ ಪುಣ್ಯ ತಿಥಿಯ ಅಂಗವಾಗಿ ಸೇವಾ ಹೀ ಸಂಘಟನ್ ಕಾರ್ಯಕ್ರಮದ ಅಡಿಯಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ತೆಕ್ಕಟ್ಟೆ ಶಕ್ತಿಕೇಂದ್ರ ವ್ಯಾಪ್ತಿಯ ಮಹಾಲಿಂಗೇಶ್ವರ ದೇವಸ್ಥಾನ ಎದುರುಗಡೆ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು .

ಹಾಗೂ ಕೋಟೇಶ್ವರ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಕೋಟೇಶ್ವರ ಪಬ್ಲಿಕ್ ಶಾಲೆಯಲ್ಲಿ ಸಸಿ ನಡುವ ಕಾರ್ಯಕ್ರಮ ನಡೆಯಿತು, ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಯವರ ಜನ್ಮದಿನದ ಜುಲೈ 6 ರ ವರೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ 222 ಬೂತ್ ಗಳಲ್ಲಿ ಬಿಜೆಪಿ ಕುಂದಾಪುರ ಮತ್ತು ಯುವಮೋರ್ಚಾ ನೇತ್ರತ್ವದಲ್ಲಿ 1500ಸಸಿ ಗಳನ್ನು ನಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ರಾದ ಶಂಕರ್ ಅಂಕದಕಟ್ಟೆ ,ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ ಬಳ್ಕೂರು,ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ ,ಯುವಮೋರ್ಚಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ,ವಿನೋಧ್ ರಾಜ್ ಶಾಂತಿನಿಕೇತನ ,ಶರತ್ ಶೆಟ್ಟಿ ಉಪ್ಪುಂದ , ಯುವಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು , ಕೊಟೇಶ್ವರ ಮಹಾಶಕ್ತಿಕೇಂದ್ರ ಅಧ್ಯಕ್ಷ ಕೃಷ್ಟ ಗೊಲ್ಲ, , ತೆಕ್ಕಟ್ಟೆ ಶಕ್ತಿ ಕೇಂದ್ರ ಅಧ್ಯಕ್ಷ ಕಿರಣ್ ಪೂಜಾರಿ,ಪ್ರಧಾನ ಕಾರ್ಯದರ್ಶಿ ಸುಧಿಂದ್ರ ಗಾಣಿಗ,ಪಂಚಾಯತ್ ಸದಸ್ಯರಾದ ವಿನೋದ್ ತೆಕ್ಕಟ್ಟೆ, ಪ್ರತಿಮಾ, ಕಮಲ, ಆನಂದ್ ಕಾಂಚನ್ ಕೊಮೆ,ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರ ಸುನಿಲ್ ಖಾರ್ವಿ, ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಕುಂದಾಪುರ ,ಸಂತೋಷ್ ಪೂಜಾರಿ ತೆಕ್ಕಟ್ಟೆ, ಕೋಟೇಶ್ವರ ಯುವಮೋರ್ಚಾ ಮಹಾಶಕ್ತಿಕೇಂದ್ರ ಅಧ್ಯಕ್ಷ ವಿವೇಕ್ ದೇವಾಡಿಗ,ರಾಮ ಚಂದ್ರ ತೆಕ್ಕಟ್ಟೆ,ಸುರೇಶ್ ಆಚಾರ್ಯ ತೆಕ್ಕಟ್ಟೆ, ಪುರಂದರ ತೆಕ್ಕಟ್ಟೆ,ವಿನೊದ್ ಕೊಮೆ, ರಾಜು ಕೊಮೆ ,ಪ್ರಶಾಂತ್ ದೇವಾಡಿಗ ತೆಕ್ಕಟ್ಟೆ ,ಸೂರಿ ಶೆಟ್ಟಿ ತೆಕ್ಕಟ್ಟೆ , ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


