ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೊರೋನಾ ಸಂಕಷ್ಟದಲ್ಲಿ ಜನಸಾಮಾನ್ಯರು ತಮ್ಮ ಜೀವನಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಆರ್ಥಿಕ ಸಂಕಷ್ಟಕ್ಕೆ ಎದುರಾಗಿರುವುದನ್ನು ಮನಗಂಡ ಕೋಟತಟ್ಟು ಪರಿಸರದ ಈ ಹಿರಿಯ ಜೀವ ಅರ್ಹ ಕುಟುಂಬಗಳಿಗೆ ದಿನಸಿ ಕಿಟ್ ನೀಡಿ ಮಾನವೀಯತೆ ಮರೆದಿದ್ದಾರೆ. ಇಲ್ಲಿನ ಕೋಟತಟ್ಟು ಗ್ರಾಮದ ಗಿರಿಯಮ್ಮ ಪೂಜಾರಿ ಕೋವಿಡ್ನಿಂದ ಕಂಗೆಟ್ಟ ಅರ್ಹಕುಟುಂಬಗಳಿಗೆ 500ಕ್ಕೂ ಅಧಿಕ ಕುಟುಂಬಗಳಿಗೆ ಸೋಮವಾರ ತಮ್ಮ ಸ್ವಗೃಹದಲ್ಲಿ ದಿನಸಿ ಕಿಟ್ ಹಸ್ತಾಂತರಿಸಿದರು.
ಕಳೆದ ವರ್ಷ ಕೂಡಾ ಸುಮಾರು 3 ಲಕ್ಷ ರೂ ಮೌಲ್ಯದ ದಿನಸಿ ಕಿಟ್ ಸುಮಾರು 250 ಕುಟುಂಬಗಳಿಗೆ ನೀಡಿದ್ದರು.
ಈ ಹಸ್ತಾಂತರ ಕಾರ್ಯಕ್ರಮದಲ್ಲಿ ಗಿರಿಯಮ್ಮ ಪುತ್ರಿ ದೀಪಾ, ಪತಿ ಲಾಯಿಡ್ ಮೊಮ್ಮಕ್ಕಳಾದ ಸೂರ್ಯ, ಆರ್ಯ, ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರ ಆಚಾರ್ಯ, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಸತೀಶ್ ಕುಂದರ್, ಸ್ಥಳೀಯರಾದ ಭರತ್ ಗಾಣಿಗ, ಪ್ರಭಾಕರ್ ಕಾಮತ್, ಚಂದ್ರಹಾಸ, ರಾಘವೇಂದ್ರ ಪೂಜಾರಿ, ಭಾಸ್ಕರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು
Advertisement. Scroll to continue reading.
In this article:Diksoochi news, diksoochi Tv, diksoochi udupi, Giriyamma poojary, kota
Click to comment