ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆದ ಪ್ಲ್ಯಾಟ್ ಮಿಲನ್ ರೆಸಿಡೆನ್ಸಿಗೆ ಐಜಿಪಿ ದೇವ್ ಜ್ಯೋತಿ ರೇ ಆಗಮಿಸಿ ಅಪರಾಧಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದರು. ಉಡುಪಿ ಜಿಲ್ಲಾ ಎಸ್ ಪಿ ವಿಷ್ಣು ವರ್ಧನ್ , ಬ್ರಹ್ಮಾವರ ವೃತ್ತ ನೀರೀಕ್ಷಕ ಅನಂತ ಪದ್ಮನಾಭ , ಉಡುಪಿ ವೃತ್ತ ನೀರೀಕ್ಷಕ ಶರಣ್ ಗೌಡ ಪಾಟೀಲ್, ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ್, ಬ್ರಹ್ಮಾವರ ಪಿ ಎಸ್ ಐ ಗುರುನಾಥ್ ಬಿ. ಹಾದಿಮನೆ ಇನ್ನಿತರ ಪೊಲೀಸ್ ತಂಡ ಆಗಮಿಸಿ ನಾನಾ ಹಂತದ ತನಿಖೆ ನಡೆಯಿತು.
ಕೊಲೆಗೀಡಾದ ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗ ಬುಧವಾರ ವಿದೇಶದಿಂದ ಬಂದ ಬಳಿಕ ಅವರ ಹೂಟ್ಟೂರಿನಲ್ಲಿ ಇಂದು ಅಂತ್ಯ ಸಂಸ್ಕಾರ ನೆರೆವೇರಿತು.
ಕೊಲೆ ನಡೆದ ಪ್ಲ್ಯಾಟ್ ನಲ್ಲಿ ಸಂದರ್ಶಕರ ಸಹಿ ಪಡೆದು ಬಿಡಲಾಗುವ ಈ ಪ್ಲ್ಯಾಟ್ ನಲ್ಲಿ ಯಾವೂದೇ ವ್ಯವಸ್ಥೆ ಇಲ್ಲ, ಸಿಸಿ ಕ್ಯಾಮರಾ ಕೂಡಾ ಇಲ್ಲ. ವಾಚ್ ಮ್ಯಾನ್ ಕೂಡಾ ಇಲ್ಲದ ಪ್ಲ್ಯಾಟ್ ನ ಮೂರನೇ ಮಹಡಿಯಲ್ಲಿ ಹಗಲು ಹೊತ್ತಿನಲ್ಲಿ ಕೇವಲ ಮೊಬೈಲ್ ಚಾರ್ಜರ್ ವಯರ್ ಮತ್ತು ಸಾಮಾನ್ಯ ಸರಿಗೆಯಿಂದ ಕೊಲೆ ಮಾಡಿದ ಕೊಲೆಗಾರ ಬಾರಿ ಪರಿಣಿತ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಕೊಲೆ ನಡೆದ ದಿನ ರಿಕ್ಷಾದಲ್ಲಿ ವಿಶಾಲ ಗಾಣಿಗ ಅವರ ತಂದೆ, ತಾಯಿ ಮತ್ತು ಮಗಳೊಂದಿಗೆ ಗುಜ್ಜಾಡಿ ತನಕ ಹೋಗಿ ಬಂದು ಕೆಲವೇ ಹೊತ್ತಿನಲ್ಲಿ ಕೊಲೆಯಾದ ಹಿನ್ನೆಲೆಯಲ್ಲಿ ಅಂದು ಕರೆದುಕೊಂಡು ಹೋದ ಸ್ಥಳಿಯ ರಿಕ್ಷಾ ಚಾಲಕರನ್ನು ವಿಚಾರಣೆಗಾಗಿ ಪೋಲೀಸರು ವಶಕ್ಕೆ ತೆಗೆದುಕೊಂಡು ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಪೊಲೀಸ್ ಇಲಾಖೆ ೪ ತಂಡವನ್ನು ಮಾಡಿ ಈಗಾಗಲೆ ಹಲವಾರು ಆಯಾಮದಲ್ಲಿ ಹಲವರನ್ನು ತನಿಖೆ ಮಾಡುತಿದ್ದು, ಕೊಲೆಗಾರನ ಜಾಡನ್ನು ಹಿಡಿಯಲು ಪ್ರಯತ್ನ ನಡೆದಿದೆ .
ಹಲವಾರು ಕ್ಲಿಷ್ಟ ಅಪರಾಧ ದ ಅಪರಾಧಿಗಳನ್ನು ಪತ್ತೆ ಹಚ್ಚಿದ ವೃತ್ತ ನೀರೀಕ್ಷಕ ಅನಂತ ಪದ್ಮನಾಭರ ನೇತೃತ್ವದ ತಂಡ ಕೊಲೆಗಾರನನ್ನು ಕೂಡಲೇ ಬಂಧಿಸುವ ಪ್ರಯತ್ನ ನಡೆಯಲಿದೆ .