Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ವಿಶಾಲ ಗಾಣಿಗ ಕೊಲೆ ಪ್ರಕರಣ; ಸ್ಥಳಕ್ಕೆ ಐಜಿಪಿ ದೇವ್‌ ಜ್ಯೋತಿ ರೇ ಭೇಟಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆದ ಪ್ಲ್ಯಾಟ್‌ ಮಿಲನ್‌ ರೆಸಿಡೆನ್ಸಿಗೆ  ಐಜಿಪಿ ದೇವ್‌ ಜ್ಯೋತಿ ರೇ  ಆಗಮಿಸಿ  ಅಪರಾಧಿಯನ್ನು ಪತ್ತೆ ಹಚ್ಚುವಂತೆ  ಸೂಚಿಸಿದರು. ಉಡುಪಿ ಜಿಲ್ಲಾ ಎಸ್‌ ಪಿ  ವಿಷ್ಣು ವರ್ಧನ್‌ , ಬ್ರಹ್ಮಾವರ ವೃತ್ತ ನೀರೀಕ್ಷಕ  ಅನಂತ ಪದ್ಮನಾಭ , ಉಡುಪಿ ವೃತ್ತ ನೀರೀಕ್ಷಕ  ಶರಣ್‌ ಗೌಡ ಪಾಟೀಲ್‌, ಮಣಿಪಾಲ  ವೃತ್ತ  ನಿರೀಕ್ಷಕ  ಮಂಜುನಾಥ್‌, ಬ್ರಹ್ಮಾವರ  ಪಿ ಎಸ್‌ ಐ ಗುರುನಾಥ್ ಬಿ. ಹಾದಿಮನೆ  ಇನ್ನಿತರ ಪೊಲೀಸ್‌ ತಂಡ  ಆಗಮಿಸಿ  ನಾನಾ  ಹಂತದ ತನಿಖೆ ನಡೆಯಿತು.

ಕೊಲೆಗೀಡಾದ ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗ  ಬುಧವಾರ ವಿದೇಶದಿಂದ ಬಂದ ಬಳಿಕ ಅವರ ಹೂಟ್ಟೂರಿನಲ್ಲಿ ಇಂದು  ಅಂತ್ಯ ಸಂಸ್ಕಾರ ನೆರೆವೇರಿತು.


ಕೊಲೆ ನಡೆದ ಪ್ಲ್ಯಾಟ್‌ ನಲ್ಲಿ  ಸಂದರ್ಶಕರ  ಸಹಿ ಪಡೆದು  ಬಿಡಲಾಗುವ  ಈ ಪ್ಲ್ಯಾಟ್‌ ನಲ್ಲಿ ಯಾವೂದೇ  ವ್ಯವಸ್ಥೆ ಇಲ್ಲ, ಸಿಸಿ ಕ್ಯಾಮರಾ ಕೂಡಾ ಇಲ್ಲ.  ವಾಚ್‌ ಮ್ಯಾನ್‌  ಕೂಡಾ  ಇಲ್ಲದ ಪ್ಲ್ಯಾಟ್‌ ನ ಮೂರನೇ ಮಹಡಿಯಲ್ಲಿ ಹಗಲು ಹೊತ್ತಿನಲ್ಲಿ   ಕೇವಲ  ಮೊಬೈಲ್‌  ಚಾರ್ಜರ್‌ ವಯರ್‌ ಮತ್ತು  ಸಾಮಾನ್ಯ ಸರಿಗೆಯಿಂದ  ಕೊಲೆ ಮಾಡಿದ ಕೊಲೆಗಾರ  ಬಾರಿ ಪರಿಣಿತ ಎನ್ನುವುದಕ್ಕೆ  ಸಾಕ್ಷಿಯಾಗಿದೆ.
ಕೊಲೆ ನಡೆದ ದಿನ  ರಿಕ್ಷಾದಲ್ಲಿ  ವಿಶಾಲ ಗಾಣಿಗ  ಅವರ ತಂದೆ, ತಾಯಿ ಮತ್ತು ಮಗಳೊಂದಿಗೆ  ಗುಜ್ಜಾಡಿ ತನಕ ಹೋಗಿ  ಬಂದು ಕೆಲವೇ ಹೊತ್ತಿನಲ್ಲಿ ಕೊಲೆಯಾದ  ಹಿನ್ನೆಲೆಯಲ್ಲಿ  ಅಂದು ಕರೆದುಕೊಂಡು ಹೋದ  ಸ್ಥಳಿಯ ರಿಕ್ಷಾ ಚಾಲಕರನ್ನು  ವಿಚಾರಣೆಗಾಗಿ ಪೋಲೀಸರು ವಶಕ್ಕೆ  ತೆಗೆದುಕೊಂಡು  ಮಂಗಳವಾರ  ಬಿಡುಗಡೆ ಮಾಡಿದ್ದಾರೆ.

Advertisement. Scroll to continue reading.


 ಪೊಲೀಸ್‌ ಇಲಾಖೆ  ೪ ತಂಡವನ್ನು ಮಾಡಿ  ಈಗಾಗಲೆ  ಹಲವಾರು ಆಯಾಮದಲ್ಲಿ  ಹಲವರನ್ನು ತನಿಖೆ ಮಾಡುತಿದ್ದು,  ಕೊಲೆಗಾರನ ಜಾಡನ್ನು  ಹಿಡಿಯಲು ಪ್ರಯತ್ನ ನಡೆದಿದೆ .
ಹಲವಾರು ಕ್ಲಿಷ್ಟ ಅಪರಾಧ ದ  ಅಪರಾಧಿಗಳನ್ನು ಪತ್ತೆ ಹಚ್ಚಿದ   ವೃತ್ತ ನೀರೀಕ್ಷಕ ಅನಂತ ಪದ್ಮನಾಭರ  ನೇತೃತ್ವದ  ತಂಡ  ಕೊಲೆಗಾರನನ್ನು ಕೂಡಲೇ ಬಂಧಿಸುವ ಪ್ರಯತ್ನ ನಡೆಯಲಿದೆ .
 
 
 

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

ರಾಷ್ಟ್ರೀಯ

0 ಲಖನೌ: ಉತ್ತರ ಪ್ರದೇಶದ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಕುರಿತು ಪುತ್ರ ಉಮರ್ ಅನ್ಸಾರಿ ಸ್ಫೋಟಕ ಹೇಳಿಕೆ ನೀಡಿದ್ದು, ತಂದೆಯನ್ನು ವಿಷಪ್ರಾಶನ ಮಾಡಿಸಿ, ಸಾವನ್ನಪ್ಪುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ...

ಅರೆ ಹೌದಾ!

0 ಚೆನ್ನೈ: ಸಾಮಾನ್ಯವಾಗಿ ಅಂಗಡಿಗಳಲ್ಲಿ ಹೆಚ್ಚೆಂದರೆ 10ರುಪಾಯಿಗೆ ಒಂದು ನಿಂಬೆ ಹಣ್ಣು ದೊರೆಯುತ್ತದೆ. ಆದರೆ ತಮಿಳುನಾಡಿನ  ವಿಲ್ಲುಪುರಂ ಜಿಲ್ಲೆಯ ಮುರುಗನ್ ದೇವಸ್ಥಾನದ ಉತಿರಂ ಹಬ್ಬದ ಸಂದರ್ಭದಲ್ಲಿ ಒಟ್ಟು ಒಂಬತ್ತು ನಿಂಬೆ ಹಣ್ಣು ಬರೋಬ್ಬರಿ 2.36...

error: Content is protected !!