ವರದಿ : ದಿನೇಶ್ ರಾಯಪ್ಪನಮಠ
ಕುಂಭಾಸಿ: ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಗೋಪಾಡಿ ಸಮೀಪ ನಡೆದಿದೆ. ಚಾಲಕ ಅದೃಷ್ಟವಶಾತ್ ಯಾವುದೇ ಜೀವಪಾಯವಿಲ್ಲದೇ ಪಾರಾಗಿದ್ದಾರೆ. ಮಂಗಳೂರಿನಿಂದ ಕಾರವಾರಕ್ಕೆ ಅಕ್ಸಿಜನ್ ತುಂಬಿಕೊಂಡು ಹೋಗುತ್ತಿದ್ದ ಪಿಕಪ್ ಸಾಗುತ್ತಿತ್ತು. ಭಾರೀ ಮಳೆ ಸುರಿಯುತ್ತಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ನಿಂತ ನೀರಿನಿಂದಾಗಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಪಿಕಪ್ ಪಲ್ಟಿ ಹೊಡೆದು ಹೆದ್ದಾರಿಯ ಪಕ್ಕದಲ್ಲಿರುವ ಶ್ರೀರಾಮ್ ಮಾರ್ಬಲ್ಸ್ ಅಂಗಡಿಯ ಎದುರಿನ ತನಕ ವಾಹನವನ್ನು ಏಳೆದೊಯ್ದಿದೆ. ಅಪಘಾತ ಸಂಭವಿಸುವ ಕೆಲವು ಕ್ಷಣಗಳ ಹಿಂದೆ ಸ್ಥಳದಲ್ಲಿ ನಿಲ್ಲಿಸಿದ ಬಾಡಿಗೆ ವಾಹನಗಳು ಅಲ್ಲಿಂದ ಬಾಡಿಗೆಗೆ ತೆರಳಿದ್ದರಿಂದ ಸಂಭವಿಸಬಹುದಾದ ಭಾರೀ ದುರಂತವೊಂದು ತಪ್ಪಿದೆ.
Advertisement. Scroll to continue reading.