ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಅಪಘಾತದಲ್ಲಿ ಗಾಯಗೊಂಡಿದ್ದ ಯಕ್ಷಗಾನ ಕಲಾವಿದ ಬಗ್ವಾಡಿ ಸುಬ್ರಹ್ಮಣ್ಯ ಮೊಗವೀರ ಅವರು ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿರುವುದು ಗಮನಕ್ಕೆ ಬಂದ ಹಿನ್ನಲೆ ತಕ್ಷಣ ಅಮ್ಮಾ ವೇದಿಕೆ ಮಿತ್ರರ ಸಹಾಯದೊಂದಿಗೆ ಗೋವಿಂದ ಬಾಬು ಪೂಜಾರಿಯವರು ಕಲಾವಿದನ ಮನೆಗೆ ಭೇಟಿ ನೀಡಿ ರೂ. 50,000 ಮೊತ್ತದ ಚೆಕ್ ಹಸ್ತಾಂತರಿಸಿದರು.
ಇದೇ ವೇಳೆ ಬಗ್ವಾಡಿ ಸುಬ್ರಹ್ಮಣ್ಯ ಮೊಗವೀರ ಅವರ ನೂತನ ಗೃಹದ ಗುದ್ದಲಿ ಪೂಜೆಯನ್ನು ಗೋವಿಂದ ಪೂಜಾರಿಯವರು ನೆರವೇರಿಸಿ ಆದಷ್ಟು ಬೇಗ ಗುಣಮುಖರಾಗಲಿ, ಕುಟುಂಬ ನೂತನ ಗೃಹದಲ್ಲಿ ವಾಸಿಸುವಂತಾಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ಅಮ್ಮಾ ಸೇವಾ ವೇದಿಕೆ ಹೆಮ್ಮಾಡಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಬಗ್ವಾಡಿ ಗ್ರಾಮದ ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.