ವರದಿ : ದಿನೇಶ್ ರಾಯಪ್ಪನಮಠ
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ 2021-22 ನೇ ಸಾಲಿನ ಪದಗ್ರಹಣ ಸಮಾರಂಭ ಇತ್ತೀಚೆಗೆ ಚೇತನಾ ಪ್ರೌಡ ಶಾಲೆಯ ಸಭಾಂಗಣದಲ್ಲಿ ಜರುಗಿತು. ಸಾಹಿತಿ ರೋಟರಿ ಶತಾಬ್ದಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ನೂತನ ಅಧ್ಯಕ್ಷ ಕಾರ್ಯದರ್ಶಿ ಯವರಿಗೆ ಪದಪ್ರಧಾನ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸ್ನೇಹ, ಒಡನಾಟ, ಸೇವೆಗೆ ಆದ್ಯತೆ ನೀಡುತ್ತಿರುವ, ಪ್ರಪಂಚದಾದ್ಯಂತ ಸಾಕಷ್ಟು ಸದಸ್ಯರನ್ನು ಹೊಂದಿರುವ, 116 ವರ್ಷ ಗಳ ಇತಿಹಾಸವಿರುವ ಬಹು ದೊಡ್ಡ ಸಮಾಜ ಸೇವಾ ಸಂಸ್ಥೆ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ. ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯ ವಿರಿಸಿಕೊಂಡು ಜಾಗತಿಕವಾಗಿ ಸೇವೆ ನೀಡುತ್ತಿದೆ. ಈ ಬಾರಿಯ ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷ ಶೇಖರ್ ಮೆಹ್ತಾ ರವರ ಕರೆ “ಬದುಕು ಬದಲಿಸುವ ನಾವು ಸೇವೆಯಿಂದ ಅರ್ಥ ಪೂರ್ಣವಾಗಿದ್ದು, ಕ್ಲಪ್ತ ಸಮಯದಲ್ಲಿ ಅವಶ್ಯರಿಗೆ ನೀಡುವ ನೆರವು ಅವರ ಬದುಕನ್ನೇ ಬದಲಿಸಬಹುದಾಗಿದೆ. ಅಂತಹ ಕಾರ್ಯಕ್ರಮ ಯಶೋದ ಹೊಳ್ಳ ಮತ್ತು ಅವರ ತಂಡದಿಂದ ಆಗಲಿ ಎಂದು ಶುಭಹಾರೈಸಿದರು.
ನೂತನ ಅಧ್ಯಕ್ಷೆ ಯಶೋದ .ಸಿ. ಹೊಳ್ಳ ಅಧ್ಯಕ್ಷತೆ ವಹಿಸಿದರು. ರೋಟರಿ ಕ್ಲಬ್ನ ” ವಿಂಶತಿ ವರ್ಷದ ಶುಭಾರಂಭವನ್ನು ಸ್ಥಾಪಕ ಅಧ್ಯಕ್ಷ ದಿ. ರಾಮಕೃಷ್ಣ ಮಂಜರ ಪುತ್ರ ಕ್ಲಬ್ನ ಮಾಜಿ ಅಧ್ಯಕ್ಷ ಡಾ. ವಿಜಯ ಮಂಜರ್ ಹಾಗೂ ಸ್ಥಾಪಕ ಕಾರ್ಯದರ್ಶಿ ಇಬ್ರಾಹಿಂ ಸಾಹೇಬ್ ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಿದರು.
ರೋಟರಿ ಫೌಂಡೇಶನ್ ಇದರ “ಪೌಲ್ ಹ್ಯಾರಿಸ್ ಸೊಸೈಟಿ ” ಇದರ ಸದಸ್ಯ ಬಿ. ಶ್ರೀನಿವಾಸ ಭಟ್ರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ರೋಟರಿ ವಲಯ 3ರ ಸಹಾಯಕ ಗವರ್ನರ್ ಕೆ. ಪದ್ಮನಾಭ ಕಾಂಚನ್ ಬ್ರಹ್ಮಾವರ, ವಲಯ ಪ್ರತಿನಿಧಿ ವಿಜಯ ಕುಮಾರ್ ಶೆಟ್ಟಿ ಸಾಯಿಬ್ರಕಟ್ಟೆ. ನಿಕಟಪೂರ್ವ ಸಹಾಯಕ ಗವರ್ನರ್ ದೇವದಾಸ್ ಶೆಟ್ಟಿಗಾರ್, ವಲಯ ಪ್ರತಿನಿಧಿ ಮುರಳೀಧರ ನಾಯರಿ ,ಪಿ. ಡಿ.ಜಿ.ಜ್ಞಾನ ವಸಂತ ಶೆಟ್ಟಿ, ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷ ವೆಂಕಟೇಶ ಭಟ್ ಗಣ್ಯರನ್ನು ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಸಿ.ಚಂದ್ರ ನಾಯರಿ ವರದಿ ಮಂಡಿಸಿದರು. ರೊ. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಘ್ನೇಶ್ ಅಡಿಗ ವಂದಿಸಿದರು.