ವರದಿ : ದಿನೇಶ್ ರಾಯಪ್ಪನಮಠ
ಕೋಟ: ಹಿಂದೂ ಧರ್ಮದಾಯದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಕೋಟತಟ್ಟು ಪಡುಕರೆ ಶಿರಸಿ ಮಾರಿಕಾಂಬ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯವರೊಂದಿಗೆ ಮಾತನಾಡಿ ಕೋವಿಡ್ ಹಿನ್ನಲ್ಲೆಯಲ್ಲಿ ಸರಕಾರ ಮಾರ್ಗಸೂಚಿಯ ಅನುಸಾರ ಕಳೆದ ಎರಡು ತಿಂಗಳುಗಳಿಂದ ತಡೆಹಿಡಿಯಲಾಗಿದ್ದು ಇದೀಗ ಒಂದೊಂದೆ ಪೂಜೆ ಪುನಸ್ಕಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.ಕೋವಿಡ್ ಜಾಗೃತಿಯ ನಡುವೆ ಪೂಜೆ ನೆರೆವೆರಿಸಿ ಭಕ್ತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿ ರಾಜ್ಯ ಸರಕಾರ ಹಿಂದೂ ದೇವಾಲಯಗಳ ಪರವಾಗಿ ಕೆಲಸ ನಿರ್ವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ,ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಅಶ್ವಿನಿ,ಉಪಾಧ್ಯಕ್ಷ ವಾಸು ಪೂಜಾರಿ,ದೇವಳ ಆಡಳಿತ ಮಂಡಳಿಯ ಅಧ್ಯಕ್ಷ ಸಂಜೀವ ಆರ್ ಕುಂದರ್,ಕಾರ್ಯದರ್ಶಿ ರಮೇಶ್ ಪೂಜಾರಿ,ಕೋಶಾಧಿಕಾರಿ ಕೆ.ಶಿವಮೂರ್ತಿ ಉಪಾಧ್ಯ,ದೇವಳದ ಗೌರವ ಸಲಹೆಗಾರಾದ ನಾಗಪ್ಪ ಪೂಜಾರಿ,ಬಾಬು ಪೂಜಾರಿ,ಸಿದ್ಧಿ ಶ್ರೀನಿವಾಸ ಪೂಜಾರಿ,ರಾಮಬಂಗೇರ,ಚಂದ್ರ ಪುತ್ರನ್,ಅನಂತ ಆರ್ ಕುಂದರ್ ಉಪಸ್ಥಿತರಿದ್ದರು. ದೇವಳದ ಅರ್ಚಕ ನೆಂದಪ್ಪ ಪೂಜಾರಿ ಪೂಜಾ ಕೈಂಕರ್ಯ ನೆರೆವೆರಿಸಿದರು.ಇದೇ ಸಂದರ್ಭದಲ್ಲಿ ಸಚಿವರಿಗೆ ದೇವಳದ ಸಭಾಭವನ ನಿರ್ಮಿಸಲು ಸರಕಾರದ ಅನುದಾನ ನೀಡಲು ಮನವಿ ನೀಡಲಾಯಿತು.