ಮಹಾರಾಷ್ಟ್ರ: ರಾಯಘಡದಲ್ಲಿ ಮೂರು ಭೂಕುಸಿತ ಗುರುವಾರ ಸಂಜೆ ಸಂಭವಿಸಿದೆ. ಈ ಘಟನೆಗಳಲ್ಲಿ ಸುಮಾರು ಮೂವತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದು, 30 ಮಂದಿ ಈ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಎನ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಮಹಾರಾಷ್ಟ್ರದ ಕರಾವಳಿ ಜಿಲ್ಲೆಯ ರಾಯಗಡ್ನಲ್ಲಿ ಮಹಾದ್ ತಹಸಿಲ್ ಮತ್ತು ಸುತ್ತಮುತ್ತ ಭೂಕುಸಿತ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಕೊಲ್ಹಾಪುರ ಜಿಲ್ಲೆಯಲ್ಲಿ 47 ಹಳ್ಳಿಗಳ ಸಂಪರ್ಕ ಕಡಿತವಾಗಿವೆ.
ಕಾರ್ಯಾಚರಣೆಗೆ ಎರಡು ನೌಕಾಪಡೆಯ ರಕ್ಷಣಾ ತಂಡಗಳನ್ನು ರಾಯಘಡ ಜಿಲ್ಲೆಯ ಮಹಾದ್ ಮತ್ತು ಐದು ತಂಡಗಳನ್ನು ರತ್ನಾಗಿರಿ ಜಿಲ್ಲೆಯ ಚಿಪ್ಲುನ್ಗೆ ಕರೆದೊಯ್ಯಲಾಗಿದೆ. ಎನ್ಡಿಆರ್ಎಫ್ ತಂಡಗಳು ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುತ್ತಿವೆ.
Advertisement. Scroll to continue reading.