Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಬಾರಕೂರು ಸಿದ್ಧೇಶ್ವರ ಸಿದ್ದಿನಾಥ  ದೇವಸ್ಥಾನದ ಬೆಳ್ತಿಕೆರೆ ಸ್ವಚ್ಛತಾ ಕಾರ್ಯ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬಾರಕೂರು ಸಿದ್ಧೇಶ್ವರ ಸಿದ್ದಿನಾಥ  ದೇವಸ್ಥಾನದ ಎದುರು  ಇರುವ ೪ ಎಕ್ರೆ  ವಿಶಾಲವಾದ ಬೆಳ್ತಿಕೆರೆಯಲ್ಲಿ ಹೂಳು ಮತ್ತು  ಕಳೆಗಿಡ ಬೆಳೆದಿದ್ದು,   ಈ ಪ್ರದೇಶದ  ಅಂತರ್‌ ಜಲ ಬತ್ತಿ ಹೋಗಿತ್ತು. ಕೆರೆಯನ್ನು ಸ್ವಚ್ಛ ಮಾಡುವುದು ಮತ್ತು ಸುತ್ತ ಮುತ್ತ ಹೂದೋಟ ಮಾಡುವ ನೆಲೆಯಲ್ಲಿ  ಇಲ್ಲಿನ ಕೆರೆ ಅಭಿವೃದ್ಧಿ ಸಮಿತಿಯವರು  ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇವರ  ಯೋಜನೆಗೆ  ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ  ಡಾ ವಿರೇಂದ್ರ ಹೆಗ್ಗಡೆಯವರು  ನಮ್ಮ ಊರು ನಮ್ಮಕೆರೆ ಯೋಜನೆಯಡಿಯಲ್ಲಿ  ಆರ್ಥಿಕ ನೆರವಾಗಿ ೨.೯೦ ಲಕ್ಷ  ನೀಡಿದ್ದರು. ರಾಜ್ಯ ಸರಕಾರ ಕೂಡಾ  ೧ ಲಕ್ಷ ನೀಡಿದ  ನೆರವಿನಿಂದ  ಸಮಿತಿಯವರು  ಜನವರಿ ತಿಂಗಳಿನಲ್ಲಿ ಕೆರೆಯಲ್ಲಿ ಇರುವ ಕಳೆಯನ್ನು   ತೆಗೆದು ಸ್ವಚ್ಛಗೊಳಿಸಲಾಗಿತ್ತು. ಈ ಕೆರೆಯ ನಿಜ ಹೆಸರಿನಂತೆ ಬೆಳದಿಂಗಳ ಕೆರೆಯಾಗಿ ಕಂಗೊಳಿಸಿತ್ತು. ಆದರೂ ಅಳಿದುಳಿದ ಕಳೆಗಿಡಗಳು ಮತ್ತೆ ಜೀವ ಕಳೆ ಬಂದು  ಕೆರೆಯನ್ನು ಮತ್ತೆ  ಮುಚ್ಚುವ ಸಾದ್ಯತೆ ಇತ್ತು.

ಮಂಗಳವಾರ ಸಮಿತಿಯ ಸದಸ್ಯರು  ಕೆರೆಯಲ್ಲಿ ಇರುವ  ಕಳೆ ಗಿಡಗಳನ್ನು  ನಾಲ್ಕಾರು ದೋಣಿಗಳ ಮೂಲಕ  ಮಾನವ ಶಕ್ತಿಯಿಂದ ತೆಗೆದು  ಇದೀಗ  ಸ್ವಚ್ಛತೆ ಮಾಡಲು  ಕಾರ್ಯಕ್ರಮ  ಹಮ್ಮಿಕೊಂಡಿದ್ದಾರೆ. ಬೇಸಗೆಯಲ್ಲಿ  ಇಲ್ಲಿನ ಪರಿಸರದಲ್ಲಿ ಈ ವರ್ಷ ಅಂತರ್‌ ಜಲ  ಹೆಚ್ಚಿದ್ದು ಸಾರ್ವಜನಿಕರಿಗೆ ತುಂಬಾ  ಉಪಯುಕ್ತವಾಗಿತ್ತು . ಇರುವ ಕೆರೆ ಸರೋವರಗಳನ್ನು ಮುಚ್ಚಿ ನಗರೀಕರಣವಾಗುತ್ತಿರುವ  ಈ  ಕಾಲಘಟ್ಟದಲ್ಲಿ ಹೊಸತಾಗಿ ಕೆರೆ ಸರೋವರಗಳನ್ನು  ಮಾಡಲಾಗದ  ನಮಗೆ  ಇರುವ ಪುರಾತನ ಕೆರೆಯನ್ನು  ಅಭಿವೃದ್ಧಿ ಮಾಡುತ್ತಿರುವ  ಯೋಜನೆಗೆ  ಸಾರ್ವ ಜನಿಕರ ಸಹಕಾರ ,ನೆರವು ಅಗತ್ಯವಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ರಾಜ್ಯ

1 ಹುಬ್ಬಳ್ಳಿ : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ.ನೇಹಾ ಹಿರೇಮಠ ಹತ್ಯೆಯಾದ ವಿದ್ಯಾರ್ಥಿನಿ. ಕಾಲೇಜ್ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ನಲ್ಲಿ...

error: Content is protected !!