ವರದಿ : ಬಿ. ಎಸ್.ಆಚಾರ್ಯ
ಕಲ್ಯಾಣಪುರ: ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಗುರುವಾರ
ರಾಜ್ಯದಲ್ಲಿ ಈ ತನಕ 8300 ಕಿಮಿ ನಡಿಗೆಯನ್ನು ಮಾಡಿದ ಜ್ಞಾನಭಿಕ್ಷಾ ಪಾದಯಾತ್ರಿ ವಿವೇಕಾನಂದ ಎಚ್. ಇವರಿಂದ ಸಂವಾದ ಕಾರ್ಯಕ್ರಮ ಜರುಗಿತು.
ಈ ಸಂದರ್ಬ ಮಾತನಾಡಿ ಅನಾರೋಗ್ಯಕಾರಿ ದೃಷ್ಯ ಮಾಧ್ಯಮಗಳು , ಟಿವಿ ಧಾರಾವಾಹಿಯಲ್ಲಿ ಮಹಿಳೆಯರಿಗೆ ಕ್ರೂರತೆಯನ್ನು ಬಿಂಬಿಸಿ ಚಿತ್ರಿಸಿ ಮಾಡುವ ಕಥೆಗಳು .ಕ್ರೀಕೆಟ್ ಆಟಗಾರರು, ಸಿನಿಮಾ ನಟರು ರಮ್ಮಿ ಆಡಿ , ಪಾನ್ ಪರಾಗ್ ತಿನ್ನಿ ,ಪೆಪ್ಸಿ ಕುಡಿಯಿರಿ ಎಂದು ಯುವಜನತೆಯನ್ನು ಹಾದಿ ತಪ್ಪಿಸುವ ಜಾಹೀರಾತುಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದೆ .
ಸರಕಾರ, ಅಧಿಕಾರಿಗಳು ಅಥವಾ ಜನನಾಯಕರು ಅಂತಹುದನ್ನು ಕಡಿವಾಣ ಹಾಕದಿರುವುದರಿಂದ ದೇಶದಲ್ಲಿ ಮುಂದಿನ ಯುವಜನತೆಗೆ ಶಕ್ತಿಯನ್ನು ಕಳೆದುಕೊಂಡು ದೇಹ ಮತ್ತು ಮನಸ್ಸನ್ನು ಹಾಳು ಮಾಡಿಕೊಳ್ಳುವಂತಾಗಿದೆ . ವೈದ್ಯಕೀಯ, ಶಿಕ್ಷಣ, ವಾತಾವರಣ , ನೀರು ಕಲುಷಿತಗೊಂಡು ಮುಂದಿನ ದಿನದಲ್ಲಿ ಈಗ ಮಾಸ್ಕ್ ಹಾಕಿಕೊಂಡಂತೆ ಗಾಳಿ ನೀರನ್ನು ಬೆನ್ನಿಗೆ ಕಟ್ಟಿಕೊಂಡು ಸಂಚಾರ ಮಾಡಬೇಕಾಗುತ್ತದೆ ದೇಶದ ಇಂದಿನ ಯುವಜನತೆ ಹತ್ತು ಕಿಮಿ ದೂರ ನಡೆಯಲು ಶಕ್ತಿ ಇಲ್ಲದಷ್ಟು ದುರ್ಬಲರಾಗಿದ್ದಾರೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ , ವಿನ್ಸೆಂಟ್ ಆಳ್ವ ಡಾ ,ಜಯರಾಮ ಶೆಟ್ಟಿಗಾರ್ , ಡಾ ಸುರೇಖ, ಪದವಿ ಪೂರ್ವಕಾಲೇಜಿನ ಪ್ರಿನ್ಸಿಪಾಲ್ ಸವಿತಾ , ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅನುಪಮ ಜೋಗಿ ಉಪಸ್ಥಿತರಿದ್ದರು.