ಕೋಟ: ರಾಜ್ಯ ಬಿಜೆಪಿ ಸರಕಾರದಲ್ಲಿ ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಶುಕ್ರವಾರ ಹುಟ್ಟೂರು ಕೋಟ ಗೆ ಆಗಮಿಸುವ ಸಂದರ್ಭದಲ್ಲಿ ಸಾಸ್ತಾನ ಮಾಬುಕಳದಲ್ಲಿ ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ರಾಜ್ಯ ಕಾರ್ಯದರ್ಶಿ ವಿಠ್ಠಲ್ ಪೂಜಾರಿ ಐರೋಡಿ ನೇತ್ರತ್ವದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ,ಕೋಡಿಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್, ಕೆ.ಎಫ್.ಡಿ.ಸಿ ನಿರ್ದೇಶಕ ಸಂದೀಪ್ ಕುಂದರ್, ಕುಂದಾಪುರ ಕ್ಷೇತ್ರ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಸತೀಶ್ ಕುಂದರ್, ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್, ಐರೋಡಿ ಗ್ರಾ.ಪಂ ಅಧ್ಯಕ್ಷೆ ಗೀತಾ ಶೆಟ್ಟಿ, ಉಪಾಧ್ಯಕ್ಷ ನಟರಾಜ್ ಗಾಣಿಗ,ಮುಖಂಡರುಗಳಾದ ರವೀಂದ್ರ ತಿಂಗಳಾಯ, ಗೋವಿಂದ ಪೂಜಾರಿ, ಶಂಕರ್ ಕುಲಾಲ್,ಪ್ರತಾಪ್ ಶೆಟ್ಟಿ,ಐರೋಡಿ ಗ್ರಾ.ಪಂ ಸದಸ್ಯ ನವೀನ್ ಕಾರಂತ್, ಅಶ್ವಿನ್, ಸುಬ್ರಹ್ಮಣ್ಯ ಆಚಾರ್ಯ, ಕಿರಣ್, ಸರೋಜ ಸಂತೋಷ್, ರಮ್ಯ, ಪಾಂಡೇಶ್ವರ ಗ್ರಾ.ಪಂ ಸದಸ್ಯ ಚಂದ್ರ ಮೊಹನ್, ಮಾಜಿ ಸದಸ್ಯರಾದ ಸುರೇಶ್ ಪೂಜಾರಿ, ಮಾಬುಕಳ ವಾಹನ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.