ಉಡುಪಿ : ಮಂಗಳವಾರ ನಿಧನರಾದ ಕಾಂಗ್ರೆಸ್ ನ ಹಿರಿಯ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರ ಅಂತಿಮ ದರ್ಶನ ಇಂದು ಅವರ ಸ್ವಗೃಹ, ಮದರ್ ಆಫ್ ಸ್ಯಾರೋಸ್ ಚರ್ಚ್ ಹಾಗೂ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಶಾಸಕ ರಘುಪತಿ ಭಟ್ , ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಿಸಿ ಕೂರ್ಮ, ರಾವ್ ಆಸ್ಕರ್ ಅವರ ಅಭಿಮಾನಿಗಳು, ಮಿತ್ರರು ಅಂತಿಮ ದರ್ಶನ ಪಡೆದರು.