ಉಡುಪಿ : ದೇವಸ್ಥಾನ, ಚರ್ಚ್, ಮಸೀದಿ ನಮ್ಮ ಶ್ರದ್ಧಾಕೇಂದ್ರಗಳು. ಶ್ರದ್ಧಾ ಕೇಂದ್ರಗಳ ರಕ್ಷಣೆ ನಮ್ಮ ಜವಾಬ್ದಾರಿ. ಅಕ್ರಮ ಸ್ಥಳದಲ್ಲಿ ಶೃದ್ಧಾಕೇಂದ್ರ ಗಳಿದ್ದರೆ, ಪೂರ್ವ ಸೂಚನೆ ಕೊಟ್ಟು, ಅಲ್ಲಿನ ಜನರ ಸ್ಥಳೀಯ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಆನಂತರ ತೆರವು ಮಾಡುವ ಬಗ್ಗೆ ಸರಕಾರ ಯೋಚಿಸಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಶ್ರದ್ಧಾ ಕೇಂದ್ರಗಳ ಬಗ್ಗೆ ಜನರ ನಂಟು ಜಾಸ್ತಿ ಇರುತ್ತದೆ. ಭಕ್ತಿ, ನಂಬಿಕೆ ಇರುತ್ತದೆ. ಅದಕ್ಕೆ ಧಕ್ಕೆ ಉಂಟಾದಾಗ ನೋವಾಗುತ್ತದೆ. ಯಾವುದೇ ಸಮುದಾಯ, ಧರ್ಮಕ್ಕೆ ನೋವುಂಟು ಮಾಡಿದರೆ, ನಮಗೆ ಒಳ್ಳೆದಾಗುವುದಿಲ್ಲ ಎಂದರು.
ಇನ್ನು ಕೇವಲ ಕರಾವಳಿ ಮಾತ್ರವಲ್ಲ, ದೇಶದ ಇತರ ಭಾಗದಲ್ಲೂ ದುರ್ಬಲತೆ ಬಳಸಿಕೊಂಡು ಮತಾಂತರ ಕಾರ್ಯ ನಡೆಯುತ್ತಿದೆ. ಮತಾಂತರ ಕುರಿತ ಕಾನೂನು ವ್ಯವಸ್ಥೆ ಗಟ್ಟಿಯಾಗಬೇಕು ಎಂದು
Advertisement. Scroll to continue reading.