ಬಾರ್ಕೂರಿನಲ್ಲಿ ರೈಲು ನಿಲುಗಡೆಗೆ ಒತ್ತಾಯಿಸಿ ಸಚಿವರು, ಸಂಸದರಿಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪತ್ರ
Published
0
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಬಾರ್ಕೂರಿನಲ್ಲಿ ಮತ್ಯ್ಸಗಂಧ ರೈಲು ನಿಲುಗಡೆ ಸ್ಥಗಿತಗೊಳಿಸದೇ, ಮೊದಲಿನಂತೆ ನಿಲುಗಡೆ ಕೊಡಬೇಕು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರೈಲ್ವೆ ಸಚಿವರಿಗೆ, ಸಂಸದರಿಗೆ ಪತ್ರ ಬರೆದಿದ್ದಾರೆ. ಬಾರ್ಕೂರು ರೈಲು ನಿಲ್ದಾಣ ಅತ್ಯಂತ ಪ್ರಮುಖ ನಿಲ್ದಾಣವಾಗಿದ್ದು, ಬ್ರಹ್ಮಾವರ ತಾಲೂಕು ಕೇಂದ್ರವನ್ನು ಸಂಪರ್ಕಿಸುತ್ತದೆ. ಅನೇಕ ಐತಿಹಾಸಿಕ ಪ್ರವಾಸಿ ತಾಣಗಳನ್ನು ಬೆಸೆಯುತ್ತದೆ. ಮುಂಬಯಿ ಮೊದಲಾದೆಡೆಗೆ ಹೋಗುವ, ಬರುವ ಪ್ರಯಾಣಿಕರಿಗೆ ಅಗತ್ಯವಿರುತ್ತದೆ. ಹಾಗಾಗಿ ಈ ಹಿಂದಿನ ರೀತಿಯಲ್ಲಿಯೇ ರೈಲನ್ನು ಬಾರ್ಕೂರಿನಲ್ಲಿ ನಿಲುಗಡೆ ಮಾಡಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.