ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದು ನಾಪತ್ತೆಯಾಗಿದ್ದ 10 ಜನ ಪ್ರಯಾಣಿಕ ಪೈಕಿ 9 ಜನ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಒಮಿಕ್ರಾನ್ ವೈರಸ್ ಇಬ್ಬರಿಗೆ ದೃಢಪಡುವ ಮೂಲಕ, ಭಾರತಕ್ಕೂ ಒಮಿಕ್ರಾನ್ ವೈರಸ್ ಆತಂಕ ಆರಂಭಗೊಂಡಿತ್ತು.
ಇದರ ನಡುವೆ ಒಮಿಕ್ರಾನ್ ವೈರಸ್ ಸೋಂಕು ದೃಢಪಟ್ಟ ನಂತರ ದಕ್ಷಿಣ ಆಫ್ರಿಕಾದಿಂದ ಬಂದಿದ್ದಂತ 10 ಪ್ರಯಾಣಿಕರು ನಾಪತ್ತೆಯಾಗಿದ್ದರು. ಅವರ ವರದಿ ನೆಗೆಟಿವ್ ಎಂಬುದಾಗಿ ದೃಢಪಟ್ಟಿದ್ದರೂ, ಜೀನೋಮಿಕ್ ಸೀಕ್ವೆನ್ ಪರೀಕ್ಷೆ ವರದಿ ಬರೋ ಮುನ್ನವೇ ಎಲ್ಲರ ಮೊಬೈಲ್ ಸ್ವಿಚ್ ಆಫ್ ಗೊಂಡು, ನಾಪತ್ತೆಯಾಗಿದ್ದರು. ಇದು ಅಧಿಕಾರಿಗಳನ್ನು, ಸರ್ಕಾರವನ್ನು ಗಾಬರಿಗೊಳಿಸಿತ್ತು. ಸೋಂಕು ಹರಡುವ ಭೀತಿ ಹಬ್ಬಿತ್ತು.
Advertisement. Scroll to continue reading.
ಈ ಕಾರಣದಿಂದಾಗಿ ಎಲ್ಲೆಲ್ಲೂ ಹೈ ಅಲರ್ಟ್ ಘೋಷಣೆ ಮಾಡಿದ್ದಂತ ರಾಜ್ಯ ಸರ್ಕಾರ, ನಿಯಂತ್ರಣ ಕ್ರಮವಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಸಾರ್ವಜನಿಕವಾಗಿ ಓಡಾಡೋದಕ್ಕೆ ಕೊರೋನಾ ಲಸಿಕೆ ಕೂಡ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು.