ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಐತಿಹಾಸಿಕ ಬಾರಕೂರು ನಡುಮನೆ ಕಂಬಳ ಮಹೋತ್ಸವ ಶುಕ್ರವಾರ ಜರುಗಿತು. ಉಭಯ ಜಿಲ್ಲೆಯ 40 ಕ್ಕೂ ಹೆಚ್ಚು ಕೋಣಗಳು ಕಂಬಳದಲ್ಲಿ ಭಾಗವಹಿಸಿತ್ತು. 4 ವಿಭಾಗದಲ್ಲಿ ಸ್ಫರ್ದೆ ಇದ್ದು ಹಲಗೆ ಓಟ, ಹಗ್ಗದ ಓಟ, ಹಿರಿಯ ಮತ್ತು ಕಿರಿಯ, ಹಲ್ಲು ಹಾಕದ ಸಬ್ ಜ್ಯೂನಿಯರ್ ಸ್ಪರ್ದೆ ನಡೆಯಿತು. ಎಲ್ಲಾ ವಿಭಾಗದಲ್ಲಿ ಪ್ರಥಮ ಮತ್ತು ದ್ವೀತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಕೋಣಗಳ ಮಾಲಕರೀಗೆ ಗೌರವ ಧನ ನೀಡಲಾಯಿತು.
ಕೋಣಗಳ ಓಟವನ್ನು ಡಿಜಿಟಲ್ ಮೂಲಕ ಸಮಯವನ್ನು ದಾಖಲಿಸಲಾಗಿತ್ತು . ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಂಬಳದ ಗುರಿಕಾರ ಬಾರಕೂರು ಶಾಂತಾರಾಮ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ನಡುಮನೆ ಕುಟುಂಭಿಕರಾದ ಕರುಣಾಕರ ಶೆಟ್ಟಿ , ಉದಯ ಶೆಟ್ಟಿ, ಸುಭಾಷ್ ಶೆಟ್ಟಿ, ಹಿರಿಯಣ್ಣ ಶೆಟ್ಟಿ, ಜಯಕರ ಶೆಟ್ಟಿ ಇನ್ನಿತರರು ನೇತೃತ್ವ ವಹಿಸಿದ್ದರು.
ಕಂಬಳದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
Advertisement. Scroll to continue reading.